ನಿತ್ಯವಾಣಿ ಶುಕ್ರವಾರದ ರಾಶಿ ಭವಿಷ್ಯ
ಮೇಷ
ಶುಕ್ರವಾರ, 11 ಜೂನ್
ಇಂದು ಮೇಷರಾಶಿಯವರಾದ ನಿಮಗೆ ಸಾಧಾರಣ ಅದೃಷ್ಟದ ಪ್ರಭಾವವಿದೆ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಆದರೂ, ಆತುರದ ನಿರ್ಧಾರ ಕೈಗೊಳ್ಳುವ ಮೂಲಕ ನಿಮ್ಮ ಆಲೋಚನಾ ರೀತಿಯನ್ನು ಜಟಿಲಗೊಳಿಸಲು ಪ್ರಯತ್ನಿಸಬೇಡಿ. ಸರಳತೆಗೆ ಬದ್ಧರಾಗಿ ಮತ್ತು ತೊಡಕಿಲ್ಲದಂತೆ ನೋಡಿಕೊಳ್ಳಿ. ಕಚೇರಿಯಲ್ಲಿ ಇಂದು ನೀವು ವಿಪರೀತ ಸ್ಪರ್ಧೆಯನ್ನು ಎದುರಿಸಬೇಕಾದೀತು ಆದರೂ ಸಮಾಧಾನ ತಂದುಕೊಳ್ಳಿ ಮತ್ತು ನಿಮ್ಮ ಉತ್ತಮ ಪ್ರಯತ್ನ ಮಾಡಿ. ಮಹಿಳೆಯರು ತಮ್ಮ ಜಗಳಗಂಟತನ ಹಾಗೂ ನಾಲಗೆಯ ಮೇಲೆ ಹತೋಟಿಯಿಡಬೇಕು. ಪ್ರಯಾಣ ಮತ್ತು ಪ್ರವಾಸ ತೆರಳುವ ಸಂಭವವಿದೆ.
ವೃಷಭ ಶುಕ್ರವಾರ, 11 ಜೂನ್
ವೃಷಭ ರಾಶಿಯವರಿಗೆ ಗೃಹಗತಿಗಳು ಅನುಕೂಲಕರವಾಗಿರುವುದಿಲ್ಲ. ನಿಮ್ಮ ನಿರ್ಧಾರವು ಸೂಕ್ತವಾಗಿರುವುದಿಲ್ಲ ಇದರ ಪರಿಣಾಮವಾಗಿ ಉತ್ತಮ ಪ್ರಯೋಜನಕಾರಿ ಅವಕಾಶಗಳನ್ನು ವ್ಯರ್ಥ ಮಾಡುತ್ತೀರಿ. ನೀವು ಏನನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯಿದೆ. ನಿಮ್ಮ ಉದ್ದೇಶದ ಮೇಲೆ ದೃಷ್ಟಿಯಿರಿಸಿ ಮತ್ತು ವ್ಯವಸ್ಥಿತಿಗೊಳಿಸುವ ಅಗತ್ಯವಿದೆ. ಹೊಸ ಮತ್ತು ಪ್ರಮುಖ ಯೋಜನೆ ಅಥವಾ ಕಾರ್ಯಗಳನ್ನು ಇಂದು ಪ್ರಾರಂಭಿಸುವುದನ್ನು ತಪ್ಪಿಸಿ. ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವ ವೇಳೆ ನಿಮ್ಮ ಸಮಾಧಾನವನ್ನು ಕಾಪಾಡಿಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಿ. ಮಾತು ಮತ್ತು ನಡತೆಯಲ್ಲಿ ಜಾಣ್ಮೆಯಿರಲಿ. ನಿಮ್ಮ ದುರಾಕ್ರಮಣ ಪ್ರವೃತ್ತಿಯನ್ನು ಹತೋಟಿಗೆ ತನ್ನಿ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಸಾಮಾನ್ಯವಾಗಿರುತ್ತದೆ.
ಮಿಥುನ
ಶುಕ್ರವಾರ, 11 ಜೂನ್
ಜನರೊಂದಿಗೆ ಬೆರೆಯಲು ಮತ್ತು ಪ್ರೀತಿಪಾತ್ರರೊಂದಿಗೆ ಮತ್ತು ಸ್ನೇಹಿತರೊಂದಿಗೆ ಹರ್ಷಪಡಲು ಉತ್ತಮ ದಿನ. ಆದ್ದರಿಂದ ಅತಿಥೇಯರಾಗಿರಿ ಮತ್ತು ನಿಮ್ಮ ಸ್ನೇಹಿತರನ್ನು ರಾತ್ರಿಯ ಊಟಕ್ಕೆ ಆಹ್ವಾನಿಸಿ ಅಥವಾ ಹೊರಗಡೆ ಸಂತೋಷಕೂಟವನ್ನು ಏರ್ಪಡಿಸಿ. ಹಣಕಾಸು ವಿಷಯದಲ್ಲೂ ನಿಮಗೆ ಅಧಿಕ ಲಾಭ ಉಂಟಾಗಲಿದೆ. ಆದರೆ ಅದನ್ನು ಮಿತಿಮೀರಿದ ಲಾಭ ಎಂದು ತಿಳಿದುಕೊಳ್ಳಬಾರದು. ನಿಮ್ಮ ವೆಚ್ಚಗಳ ಮೇಲೆ ಹಿಡಿತವಿರಲಿ ಮತ್ತು ಜಾಗರೂಕತೆಯಿಂದ ಖರ್ಚು ಮಾಡಿ. ನಕಾರಾತ್ಮಕತೆಯು ನಿಮ್ಮ ದಿನವನ್ನು ಹಾಳು ಮಾಡದಂತೆ ಅವುಗಳನ್ನು ಕೂಡಲೇ ತೊಡೆದು ಹಾಕಬೇಕು. ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರಿಂದ ಉಡುಗೊರೆಗಳನ್ನು ನಿರೀಕ್ಷಿಸಿ.
ಕರ್ಕಾಟಕ
ಶುಕ್ರವಾರ, 11 ಜೂನ್
ಇಂದಿನ ಗ್ರಹಗತಿಗಳು ನಿಮ್ಮ ಮನಸ್ಸನ್ನು ಚಂಚಲ ಹಾಗೂ ಆತಂಕದಲ್ಲಿರಿಸುತ್ತದೆ. ನೀವು ಶಾಂತರಾಗಿರಬೇಕು ಇಲ್ಲವಾದಲಿ ಮಾನಸಿಕ ಅಸ್ಥಿರತೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ನಿರ್ಧಾರ ಕೈಗೊಳ್ಳುವಿಕೆಯನ್ನು ನಿಜಕ್ಕೂ ಕಠಿಣವಾಗುತ್ತದೆ. ಇದು ಹತಾಶಗೆ ಎಣೆಮಾಡಿಕೊಡುತ್ತದೆ. ಹುತ್ತವನ್ನು ಬೆಟ್ಟಮಾಡುವುದರಿಂದ ಏನೂ ಪ್ರಯೋಜನವಿಲ್ಲ. ವಾಸ್ತವವಾಗಿ, ಬಿಸಿ ಚರ್ಚೆಗಳಿಂದ ಅಥವಾ ಕಿತ್ತಾಟಗಳಿಂದ ಸಾಧ್ಯವಾದಷ್ಟು ದೂರವಿರಿ ಇಲ್ಲವಾದಲ್ಲಿ ಕ್ಷೋಭೆಗೊಳಗಾಗಿ ಪರಿಸ್ಥಿತಿಯು ಇನ್ನಷ್ಚು ಹದಗೆಡುತ್ತದೆ. ಸಾಮಾನ್ಯರಂತೆ ವರ್ತಿಸುವಂತೆ ಮತ್ತು ವಿದ್ರೋಹಿಯಾಗದಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಹಣಕಾಸು ತೊಂದರೆಗಳಿಂದ ಮತ್ತು ಅನಾರೋಗ್ಯದಿಂದ ನಿಮ್ಮ ದಿನವು ಕೊನೆಗೊಳ್ಳಬಹುದು ಆದ್ದರಿಂದ ನಿಮ್ಮ ಆಹಾರ ಕ್ರಮ ಮತ್ತು ವಾಲೆಟ್ ಬಗ್ಗೆ ಎಚ್ಚರವಹಿಸಿ.
ಸಿಂಹ
ಶುಕ್ರವಾರ, 11 ಜೂನ್
ಸಿಂಹರಾಶಿಯವರಿಗೆ ಸಾಧಾರಣ ದಿನ ಕಾದಿದೆ, ಪರಿಸ್ಥಿತಿಯು ಇಂದು ಅನುಕೂಲಕರವಾಗಿರುತ್ತದೆ ಆದರೆ, ನೀವು ಮರೆಗುಳಿತನದಿಂದಿದ್ದರೆ ಅಥವಾ ತಪ್ಪುದಾರಿ ಹಿಡಿದರೆ ಪರಿಸ್ಥಿತಿಯ ಪ್ರಯೋಜನವನನ್ನು ಪಡೆಯಲು ವಿಫಲರಾಗುತ್ತೀರಿ. ನಿಮ್ಮ ಗಮನ ಒಂದೇ ಕಡೆಯಿರಲಿ. ಹೊಸ ಯೋಜನೆಗಳನ್ನು ಅಥವಾ ಕಾರ್ಯಗಳನ್ನು ಮುಂದೂಡಿ. ಈ ದಿನ ಫಲಪ್ರದವಾದುದಲ್ಲ. ಸ್ನೇಹಿತರು ನಿಮ್ಮ ಜೊತೆಗಿರುತ್ತಾರೆ ಮತ್ತು ಅದರಲ್ಲಿ ಕೆಲವರು ನಿಮಗೆ ಸಹಾಯ ಮಾಡುತ್ತಾರೆ. ವಿನೋದ ವಿಹಾರಕ್ಕೆ ಸಿದ್ಧತೆ ನಡೆಸಬಹುದು. ವ್ಯವಹಾರವು ಉತ್ತಮವಾಗಿ ಸಾಗುತ್ತದೆ. ಧನಲಾಭದ ಯೋಗವಿದೆ..
ಕನ್ಯಾ
ಶುಕ್ರವಾರ, 11 ಜೂನ್
ಕನ್ಯಾರಾಶಿಯವರಿಗೆ ಫಲಪ್ರದ ದಿನವು ಕಾದಿದೆ, ಹೊಸ ಯೋಜನೆಗಳನ್ನು ಪ್ರಾರಂಭಿಸಲು ಆಲೋಚಿಸಿದ್ದಲ್ಲಿ ಅದನ್ನು ಕೂಡಲೇ ಪ್ರಾರಂಭಿಸಬೇಕು. ಈ ದಿನವು ವೃತ್ತಿ ಜೀವನಕ್ಕೆ ಮತ್ತು ಇನ್ನಷ್ಟು ಅಭಿವೃದ್ಧಿಯ ಗುರಿಯನ್ನು ಹೊಂದಿರುವವರಿಗೆ ಅನುಕೂಲಕರವಾಗಿದೆ. ಮತ್ತು ಈ ಸಂದರ್ಭದಲ್ಲಿ ನೀವು ಖಂಡಿತವಾಗಿಯೂ ಕಚೇರಿಯಲ್ಲಿ ಬಡ್ತಿ ಹಾಗೂ ಉತ್ತೇಜನವನ್ನು ನಿರೀಕ್ಷಿಸಬಹುದು. ವೈಯಕ್ತಿಕ ನೆಲೆಯಲ್ಲಿ ಪರಿಸ್ಥಿತಿಯು ವೆಲ್ವೆಟ್ ರೀತಿಯಲ್ಲಿ ಮೃದುವಾಗಿರುತ್ತದೆ. ಇಂದು ಸರಕಾರಿ ಲಾಭ ಮತ್ತು ಪ್ರಯೋಜನಗಳು ಸಿಗುವ ಸಾಧ್ಯತೆಗಳನ್ನು ಗ್ರಹಗತಿಗಳು ಸೂಚಿಸುತ್ತವೆ. ಇದನ್ನು ಇನ್ನಷ್ಟು ಸುಲಭಗೊಳಿಸಲು ಸರಕಾರಿ ಕಾರ್ಯಗಳಿಗಾಗಿ ನೀವು ಆಚೀಚೆ ಓಡಬೇಕಾಗಿಲ್ಲ. ನಿಮ್ಮ ಕೆಲಸವು ಸರಾಗವಾಗಿ ನಡೆಯುತ್ತದೆ.
ತುಲಾ
ಶುಕ್ರವಾರ, 11 ಜೂನ್
ಬೌದ್ಧಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವ ಅತೀವ ಹಂಬಲವು ನಿಮ್ಮನ್ನು ಸಾಹಿತ್ಯ, ಚಿತ್ರಕಲೆ ಮುಂತಾದ ಲಲಿತಕಲೆಗಳತ್ತೆ ಆಕರ್ಷಿಸುತ್ತದೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು, ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ವೃತ್ತಿಗೆ ಸಂಬಂಧಿಸಿ ನೀವು ಉತ್ತಮ ಫಲವನ್ನೇ ಪಡೆಯುವಿರಿ ಮತ್ತು ನಿಮ್ಮ ಸಹೋದ್ಯೋಗಿಗಳಿಂದ ಮತ್ತು ಮೇಲಾಧಿಕಾರಿಗಳಿಂದ ಸಹಾಯವನ್ನು ಪಡೆಯುವಿರಿ. ಅಲ್ಲದೆ ಉತ್ತಮ ನಿರ್ವಹಣೆಗಾಗಿ ನಿಮಗೆ ಪ್ರಚೋದನೆಯೂ ದೊರೆಯುತ್ತದೆ. ಉದ್ಯಮಿಗಳು ಇಂದು ಲಾಭದಾಯಕ ದಿನ. ಏನೇ ಆದರೂ, ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನಹರಿಸಿ. ಆರೋಗ್ಯಕರ ಆಹಾರವನ್ನೇ ಸೇವಿಸಿ. ನಿಮ್ಮ ಸುತ್ತಲಿರುವ ಜನರೊಂದಿಗೆ ಅನಗತ್ಯ ವಾಗ್ವಾದಗಳಲ್ಲಿ ಮತ್ತು ಬಿಸಿ ಚರ್ಚೆಗಳನ್ನು ತೊಡಗುವುದನ್ನು ತಪ್ಪಿಸಿ. ಯಾತ್ರಾಸ್ಥಳಕ್ಕೆ ತೆರಳುವ ಸಂಭವವಿದೆ.
ವೃಶ್ಚಿಕ
ಶುಕ್ರವಾರ, 11 ಜೂನ್
ಇಂದು ಒಳ್ಳೆಯ ದಿನವನ್ನು ನಿರೀಕ್ಷಿಸಬೇಡಿ, ನೀವು ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ.ತುಂಬಾ ಸಮಯದವರೆಗೆ ನೀವು ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಖರ್ಚು ಮಿತಿಯಲ್ಲಿರಲಿ. ಬಿಯರ್ ಬಜೆಟ್ನಲ್ಲಿ ಚಾಂಪೇನ್ ರುಚಿ ನೋಡಲು ಬಯಸಿದೆ ನಿಮ್ಮ ಕಿಸೆ ಖಾಲಿಯಾಗಬಹುದು. ಅನೈತಿಕ ಮತ್ತು ಕಾನೂನು ವಿರೋಧಿ ಚಟುವಟಿಕೆಗಳಿಂದ ದೂರವಿರಿ ಇಲ್ಲವಾದಲ್ಲಿ ಕೋರ್ಟ್ ಮೆಟ್ಟಿಲು ಹತ್ತಬೇಕಾದೀತು. ಇಂದು ಅಪರಿಚಿತರೊಂದಿಗೆ ಸಂಭಾಷಣೆ ಅಥವಾ ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಅಷ್ಟೊಂದು ಸೂಕ್ತವಲ್ಲ. ಹಾಗೇನಾದರೂ ಅನಿವಾರ್ಯವಿದ್ದಲ್ಲಿ ಸ್ವಲ್ಪ ಹೊತ್ತು ಯೋಚಿಸಿ ನಂತರ ಜನರೊಂದಿಗೆ ಮೈತ್ರಿಯನ್ನು ಬೆಳೆಸಿ. ಯೋಗಾಭ್ಯಾಸ ಮತ್ತು ಧ್ಯಾನ ಮಾಡಿದರೆ ಉತ್ತಮ. ಇದು ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.
ಧನು
ಶುಕ್ರವಾರ, 11 ಜೂನ್
ನೀವು ನಿಮ್ಮ ದಿನವನ್ನು ಅತ್ಯಂತ ಸಂತೋಷದಿಂದ ಕಳೆಯುತ್ತೀರಿ. ಸಾಕಷ್ಟು ಮನರಂಜನೆ ಹಾಗೂ ಮೋಜನ್ನು ಅನುಭವಿಸುತ್ತೀರಿ. ಸಾಮಾಜಿಕ ಸಭೆ ಅಥವಾ ಸಮಾರಂಭಗಳಲ್ಲಿ ವಿವಿಧ ಸಂಸ್ಕೃತಿಯ ಜನರನ್ನು ಭೇಟಿ ಮಾಡುವಿರಿ. ಸ್ನೇಹಿತರು ಮತ್ತು ಆಪ್ತರೊಂದಿಗೆ ವಿಹಾರಕೂಟ ತೆರಳುವ ಯೋಜನೆಯು ಉತ್ತಮವಾಗಿರುತ್ತದೆ. ಇಂದು ನಿಮ್ಮ ಸೃಜನಶೀಲತೆಯನ್ನು ಗ್ರಹಗತಿಗಳು ಎತ್ತಿಹಿಡಿಯುತ್ತವೆ ಮತ್ತು ಅದನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಆದ್ದರಿಂದ ಮುಂದಕ್ಕೆ ಸಾಗಿ ನಿಮ್ಮ ಕಲ್ಪನೆಯಲ್ಲಿ ಹೊಸ ಕಲೆಯನ್ನು ಸೃಷ್ಟಿಸಿ. ಧನುರಾಶಿಯ ಉದ್ಯಮಿಗಳಿಗೆ ಇಂದು ಲಾಭದಾಯಕವಾಗಲಿದೆ. ನೀವು ಗೌರವವನ್ನೂ ಸಂಪಾದಿಸುವಿರಿ.
ಮಕರ
ಶುಕ್ರವಾರ, 11 ಜೂನ್
ಚಿತ್ರದ ವಿವರಣೆ ಸಾವಿರ ಶಬ್ಧಗಳಿಗೆ ಸಮಾನ. ಅಂತೆಯೇ ಈ ದಿನ ಚಿತ್ರದಂತೆ ಸುಸ್ಪಷ್ಟ ಉದ್ಯಮಿಗಳು, ವೃತ್ತಿಪರರು, ಗೃಹಿಣಿಯರು ಮತ್ತು ವಿದ್ಯಾರ್ಥಿಗಳು ಜೀವನ ಎಷ್ಟು ಸೌಕರ್ಯಪೂರ್ಣ ಮತ್ತು ನೆಮ್ಮದಿಯಿಂದಿರಲು ಸಾಧ್ಯ ಎಂಬುದನ್ನು ಕಾಣುವ ಅವಕಾಶ ಪಡೆಯುತ್ತಾರೆ. ಹಣಕಾಸಿನ ವಿಚಾರವಿರಲಿ, ಕುಟುಂಬ ಅಥವಾ ವೃತ್ತಿ ಜೀವನವಿರಲಿ ನಿಮ್ಮ ದೋಣಿಯು ಸುಗಮವಾಗಿ ಸಾಗುವುದು. ಸರಕಾರ ಮತ್ತು ಅದರ ಇಲಾಖೆಗಳ ಅಧಿಕಾರಿಗಳು ನಿಮ್ಮೆದೆಗೆ ಬೀಸುವ ಮಂದ ಬಿರುಗಾಳಿಗಳನ್ನು ತಡೆಯುವಿರಿ ಮತ್ತು ಕುಗ್ಗಿಸುವಿರಿ. ಆರೋಗ್ಯದ ತೊಂದರೆಗಳು ಉಂಟಾಗುವುದಿಲ್ಲ.
ಕುಂಭ
ಶುಕ್ರವಾರ, 11 ಜೂನ್
ಗ್ರಹಗತಿಗಳು ಇಂದು ನಿಮಗೆ ತೊಂದರೆ ನೀಡುವ ಸಾಧ್ಯತೆ ಇದೆ. ದಿನವಿಡೀ ನೀವು ತಳಮಳ ಹಾಗೂ ವ್ಯಾಕುಲತೆಯಿಂದ ಕೂಡಿರುವುದರಿಂದ ಹೊಸ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಮತ್ತು ಪ್ರಯಾಣವನ್ನು ತಪ್ಪಿಸಿ.ಮಹಿಳೆಯರು ತಮ್ಮ ಜಗಳಗಂಟಿತನವನ್ನು ಹತೋಟಿಯಲ್ಲಿಡಬೇಕು ಮತ್ತು ಪ್ರತಿ ಸಮಯದಲ್ಲೂ ಸಮಾಧಾನದಿಂದಿರಬೇಕು. ಉತ್ತಮ ಉಪಾಯವೆಂದರೆ ನಿಮ್ಮನ್ನು ಪ್ರಚೋದಿಸುವ ಜನರ ಮುಖಾಂತರ ನೋಡುವುದು. ನಿಮ್ಮ ಸೃಜನಶೀಲ ಒಲವನ್ನು ಸುಂದರವಾದ ಕಲಾಕೃತಿಯೊಂದಿಗೆ ಮೇಲೆ ಬರಲು ಈ ದಿನವು ಹುರಿದುಂಬಿಸುತ್ತದೆ. ಬೌದ್ಧಿಕ ಚರ್ಚೆಯಲ್ಲಿ ಮತ್ತು ಚಟುವಟಿಕೆಗಳಲ್ಲಿ ನೀವು ಭಾಗವಹಿಸಬಹುದಾಗಿದ್ದು, ಇದರಿಂದಾಗಿ ನಿಮ್ಮ ಬುದ್ಧಿಮಟ್ಟ ವರ್ಧಿಸುವ ಅನುಭವವಾಗುತ್ತದೆ. ಅನಿರೀಕ್ಷಿತ ವೆಚ್ಚಗಳುಂಟಾಗುವ ಸಾಧ್ಯತೆಯಿದೆ.
ಮೀನ
ಶುಕ್ರವಾರ, 11 ಜೂನ್
ತುಂಬಾ ಪರೀಕ್ಷೆಯನ್ನು ಎದುರಿಸುವ ದಿನ ಬರಲಿದೆ, ವಾಸ್ತವವಾಗಿ ಪ್ರತಿ ಹಂತದಲ್ಲೂ ನೀವು ಎದುರಿಸುವ ಸಮಸ್ಯೆಗಳು ನಿಷ್ಕರುಣೆಯಂತಾಗಿರುತ್ತದೆ. ಪರಿಣಾಮವಾಗಿ, ದಿನಪೂರ್ತಿ ನೀವು ಧೈರ್ಯ ಕಳೆದುಕೊಳ್ಳುವಿರಿ. ನಿಮ್ಮ ಆರೋಗ್ಯ ಮತ್ತು ಆಸ್ತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಆದ್ದರಿಂದ ದಿನವನ್ನು ಸಾದ್ಯವಿದ್ದಷ್ಟು ಸಮಾಧಾನದಿಂದ ಕಳೆಯಲು ಪ್ರಯತ್ನಿಸಿ. ಮಹಿಳೆಯರೊಂದಿಗೆ ಮಾತುಕತೆ ನಡೆಸುವಾಗ ನಿಮ್ಮ ಮಾತಿನ ಬಗ್ಗೆ ಹಿಡಿತವಿಡಲು ಪ್ರಯತ್ನಿಸಬೇಕು. ಕಟು ಹಾಗೂ ತೀಕ್ಷ್ಣ ವರ್ತನೆಯು ನಿಮ್ಮನ್ನು ಪೇಚಿಗೆ ಸಿಲುಕಿಸುತ್ತದೆ. ಉದ್ಯೋಗ ಮಟ್ಟದಲ್ಲಿ ಈ ದಿನವು ಅತ್ಯಂತ ಚಿಂತೆ ಹಾಗೂ ತೊಂದರೆಗಳಿಂದ ಕೂಡಿರುತ್ತದೆ. ಆಸ್ತಿ ಮತ್ತು ವಾಹನಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಇಂದು ನೀವು ಎಚ್ಚರಿಕೆಯಿಂದಿರಬೇಕಾಗುತ್ತದೆ.
ಸುದ್ದಿಗಾಗಿ, ಜಾಹೀರಾತಿಗಾಗಿ 👉 ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020