ನಿತ್ಯವಾಣಿ ಬುಧವಾರದ ರಾಶಿ ಭವಿಷ್ಯ 🙏🙏
ಮೇಷ
ಬುಧವಾರ, 16 ಜೂನ್
ಮುಖದಲ್ಲಿ ದುಗುಡತೆ, ತರಾತುರಿ… ಈ ವ್ಯಕ್ತಿ ಯಾರೆಂದು ಊಹಿಸಬಲ್ಲಿರಾ? ಹೌದು ಅದು ನೀವೇ. ಮತ್ತು ಈಗ ವಿಶೇಷವಾಗಿ ನೀವು ಈ ಸ್ಥಿತಿಯಲ್ಲಿರುತ್ತೀರಿ. ನಿಮ್ಮಲ್ಲಿರುವ ಪ್ರತಿಭಟನಾತ್ಮಕ ನಿಲುವನ್ನು ಹತೋಟಿಗೆ ತರುವಂತೆ,ತಾಳ್ಮೆಯಿಂದಿರಿ ಮತ್ತು ಆತುರದ ಪ್ರತಿಕ್ರಿಯೆ ಅಥವಾ ನಿರ್ಧಾರವನ್ನು ತಪ್ಪಿಸಿ. ಇಂದು ನೀವು ಮಾನಸಿಕವಾಗಿ ಕುಗ್ಗಬಹುದು. ಅಪೇಕ್ಷಿತ ಫಲಿತಾಂಶವನ್ನು ಪಡೆಯುವ ನಿಮ್ಮ ಹೆಣಗಾಟವು ಕೊನೆಯಿಲ್ಲದ್ದಾಗಿರುತ್ತದೆ ಆದರೂ, ಅಧಿಕಾರ ಸಂಬಂಧಿ ಕಾರ್ಯಗಳಿಂದ ಪ್ರಯೋಜನ ಉಂಟಾಗುತ್ತದೆ. ಇಂದು ನಿಮ್ಮ ಗ್ರಹಗತಿಯು ಉತ್ತಮವಾಗಿರುವುದಿಲ್ಲ. ಕಚೇರಿಯಲ್ಲಿ ನಿಮಗಾಗಿ ಸಾಕಷ್ಟು ಕೆಲಸಗಳು ಕಾದಿರುತ್ತದೆ ಮತ್ತು ಇದನ್ನು ಪೂರ್ಣಗೊಳಿಸಲು ನೀವು ಎಂದಿಗಿಂತ ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರ ಫಲವಾಗಿ, ನಿಮ್ಮ ಸಾಯಂಕಾಲದ ಯೋಜನೆಗಳನ್ನು ನೀವು ಮುಂದೂಡಬೇಕಾದ ಅಗತ್ಯ ಬರಬಹುದು. ಅಲ್ಪಮಟ್ಟ ಉದರ ಸಂಬಂಧಿ ಕಾಯಿಲೆ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಬಗ್ಗೆ ಕಾಳಜಿವಹಿಸಿ.
ವೃಷಭ
ಬುಧವಾರ, 16 ಜೂನ್
ನೀವು ಆತ್ಮವಿಶ್ವಾಸ ಉಳ್ಳವರಾಗಿರುತ್ತೀರಿ ಅಲ್ಲದೆ ನಿನ್ನೆಯ ತಾರಾಬಲದಿಂದ ನಿಮ್ಮ ಆತ್ಮವಿಶ್ವಾಸ ಇಮ್ಮಡಿಗೊಳ್ಳುತ್ತದೆ. ಹೆಚ್ಚು ಆತ್ಮವಿಶ್ವಾಸ ಮತ್ತು ದೈರ್ಯದಿಂದಿರುತ್ತೀರಿ ಮತ್ತು ಕಾರ್ಯದಲ್ಲಿ, ವ್ಯವಹಾರದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಅತ್ಯುತ್ತಮ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ,ಎಲ್ಲಾ ಕಾರ್ಯಕ್ಷೇತ್ರಗಳಿಂದಲೂ ನಿಮಗೆ ಯಶಸ್ಸು ಖಂಡಿತವಾಗಿಯೂ ಒಲಿಯಲಿದೆ. ನಿಮ್ಮ ತಂದೆಯಿಂದ ನಿಮಗೆ ಲಾಭ ಉಂಟಾಗಬಹುದು ಮತ್ತು ನೀವು ಹೆತ್ತವರಾಗಿದ್ದಲ್ಲಿ, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಂಡವಾಳ ಹೂಡಬಹುದು. ಸಾರ್ವಜನಿಕ ಕ್ಷೇತ್ರಗಳಿಗೆ ಸಂಬಂಧಿಸಿ ಯಾವುದಾದರೂ ವ್ಯವಹಾರವನ್ನು ಹೊಂದಿದ್ದರೆ, ನಿಮಗೆ ಧನಲಾಭ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ಮತ್ತು ಪರೀಕ್ಷೆಗಾಗಿ ತಯಾರು ನಡೆಸುತ್ತಿರುವುವವರಿಗೆ ಇದು ಉತ್ತಮ ದಿನ. ನಿಮ್ಮ ಜೀವನವನ್ನು ಆನಂದಿಸಿ.
ಮಿಥುನ
ಬುಧವಾರ, 16 ಜೂನ್
ಎಲ್ಲಾ ಹೊಸ ಒಪ್ಪಂದಗಳಿಗೆ ಮತ್ತು ಯೋಜನೆಗಳಿಗೆ ಇಂದು ಮುಂದಕ್ಕೆ ಸಾಗಿ ಮತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಮತ್ತು ನಿಮ್ಮ ವ್ಯವಹಾರವು ಮುಕ್ತಾಯಗೊಳ್ಳುತ್ತದೆ.ಸಾರ್ವಜನಿಕ ಕ್ಷೇತ್ರಗಳಲ್ಲಿ ಅಥವಾ ಉನ್ನತ ಪ್ರಾಧಿಕಾರದೊಂದಿಗಿನ ಕಾರ್ಯನಿರ್ವಹಣೆಯಿಂದ ಪ್ರಯೋಜನ ಉಂಟಾಗಲಿದೆ ಹಾಗೂ ಉತ್ತಮ ಫಲ ಸಿಗಲಿದೆ. ಆದರೆ ಎಲ್ಲಾ ಎಚ್ಚರಿಕೆಗಳನ್ನು ಕಡೆಗಣಿಸಿ ನಿಮ್ಮ ಗಳಿಕೆಯ ಪ್ರಮಾಣವನ್ನು ಕುಗ್ಗಿಸಬೇಡಿ. ನೆರೆಯವರ ಅಥವಾ ಒಡಹುಟ್ಟಿದವರ ಒರಟು ವರ್ತನೆಯಿಂದ ಬೇಸರಗೊಳ್ಳುವಿರಿ. ಸಾಧ್ಯವಿದ್ದರೆ ಸಂಘರ್ಷದಿಂದ ದೂರವಿರಿ. ಕೆಲವು ಜನರು ಹಾಗೂ ವಿಚಾರಗಳ ಬಗೆಗಿನ ನಿಮ್ಮ ಅಭಿಪ್ರಾಯವನ್ನು ಬದಲಾಯಿಸಬೇಕಾಗಬಹುದು. ಯಾವುದೇ ನಂಬಲರ್ಹವಲ್ಲದ ಹಣಕಾಸು ಯೋಜನೆಗಳ ಬಗ್ಗೆ ಎಚ್ಚರಿಕೆಯಿಂದಿರಿ ಮತ್ತು ಹಣಕಾಸು ವಿಚಾರಗಳ ಬಗ್ಗೆ ಜಾಗರೂಕರಾಗಿರಿ.
ಕರ್ಕಾಟಕ
ಬುಧವಾರ, 16 ಜೂನ್
ಋಣಾತ್ಮಕ ಮತ್ತು ನಿರಾಶಾವಾದದ ಚಿಂತನೆಗಳಿಂದ ದೂರವಿರುವಂತೆ ಕರ್ಕಾಟಕ ರಾಶಿಯವರು ಬೇಸರಿಸುವುದು ಹಾಗೂ ಚಿಪ್ಪಿನೊಳಗೆ ಹೋಗುವುದು ಸಹಜ. ಆದರೆ, ಇದು ನಿಮಗೆ ಕಂಟಕದಾಯಕ ಹಾಗೂ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಕರ. ನಿಮ್ಮ ಪ್ರೀತಿಪಾತ್ರರಿಂದ ನೋವಾಗಿದ್ದಲ್ಲಿ ಅದನ್ನು ತೋರ್ಪಡಿಸಿಕೊಳ್ಳಿ ಮತ್ತು ಸರಿಪಡಿಸಿಕೊಳ್ಳಿ. ಬದಲಾಗಿ ಮುನಿಸಿಕೊಂಡು ಕೂರಬೇಡಿ. ಕುಟುಂಬ ಸದಸ್ಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಇದು ನಿಮ್ಮ ಮನೆಯ ವಾತಾವರಣವನ್ನು ಖಂಡಿತವಾಗಿಯೂ ಪ್ರಕ್ಷುಬ್ಧಗೊಳಿಸುತ್ತದೆ. ವಿಚಾರಗಳ ಬಗ್ಗೆ ಚರ್ಚಿಸಿ ಸ್ಪಷ್ಟಪಡಿಸಿಕೊಳ್ಳಿ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಇದು ಉತ್ತಮ ದಿನವಲ್ಲ. ಆದರೂ, ಧೈರ್ಯ ಕಳೆದುಕೊಳ್ಳಬೇಡಿ!ದುರ್ಮಾರ್ಗದಿಂದ ಮತ್ತು ಕೆಟ್ಟ ಚಿಂತನೆಗಳಿಂದ ದೂರವಿರಿ.
ಸಿಂಹ
ಬುಧವಾರ, 16 ಜೂನ್
ಬಲಿಷ್ಠ ಸಿಂಹವು ಇಂದು ನಿಜವಾದ ಸ್ಥಿತಿಯಲ್ಲಿರುತ್ತದೆ.ನೀವು ಧೈರ್ಯವಂತರು, ತೆರೆದ ಮನಸ್ಸಿನವರು ಮತ್ತು ಸಂಪೂರ್ಣ ಸ್ವನಂಬಿಕೆಯನ್ನು ಹೊಂದಿರುವವರು. ಇಂದು ನಿಮ್ಮ ನಿರ್ಧಾರ ಕೈಗೊಳ್ಳುವ ಕೌಶಲ್ಯವು ಅತ್ಯುತ್ತಮವಾಗಿರುತ್ತದೆ ಇದರಿಂದಾಗಿ ದೃಢ ನಿರ್ಧಾರಗಳನ್ನು ಕೈಗೊಳ್ಳಲು ನಿಮಗೆ ಸುಲಭವಾಗುತ್ತದೆ. ಪಿತೃಮೂಲದಿಂದ ಅಥವಾ ಹಿರಿಯರಿಂದ ನಿಮಗೆ ಲಾಭ ಉಂಟಾಗಲಿದೆ. ಇದು ಗೌರವ ವೃದ್ಧಿಯಾಗಿರಬಹುದು ಅಥವಾ ಸಮಾಜದಲ್ಲಿನ ಸ್ಥಾನಮಾನವಾಗಿರಬಹುದು, ಅದು ನಿಮಗೆ ಸಿಗಲಿದೆ. ಆತ್ಮವಿಶ್ವಾಸವು ಒಳಿತನ್ನು ತಂದರೆ ದುರಹಂಕಾರವು ಕೆಡುಕನ್ನು ಉಂಟುಮಾಡುತ್ತದೆ.ಇದರಿಂದ ಕಟ್ಟುನಿಟ್ಟಾಗಿ ಇದರಿಂದ ದೂರವಿರಿ.ನಿಮ್ಮ ಮಾತು ಹಾಗೂ ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಕನ್ಯಾ
ಬುಧವಾರ, 16 ಜೂನ್
ನೀವು ಅತಿ ಪ್ರಭಾವಿತರು ಎಂದು ಒಪ್ಪಿಕೊಂಡು ಹಾಗೂ ನಿಮಗೆ ನಿಮ್ಮ ವಿಶ್ವಾಸಯುಕ್ತ ವರ್ತನೆ ಜಗತ್ತಿಗೆ ತೋರಿಸಲು ಸಮಯವಿಲ್ಲದಿರುವುದರಿಂದ ನಿಮ್ಮ ಈ ಗುಣಗಳು ನಿಮ್ಮ ತಲೆಗೆ ಹೋಗದಂತೆ ಎಚ್ಚರವಹಿಸಿ. ನಿಮ್ಮ ನಡಿಗೆಯಿಂದ ಅಹಂನ ಬಿಂಕ ಹಾಗೂ ನಿಮ್ಮ ವ್ಯಕ್ತಿತ್ವದ ದುರಭಿಮಾನವನ್ನು ಕಿತ್ತೊಗೆಯಿರಿ. ಇದನ್ನು ಸರಿಪಡಿಸದಿದ್ದಲ್ಲಿ ನಿಮ್ಮ ತರಹವೇ ಅಹಂನ್ನು ದುಬಾರಿ ಬೆಲೆಯ ರೀತಿ ಹೊತ್ತು ತಿರುಗುತ್ತಿರುವವರೊಂದಿಗೆ ಮುಖಾಮುಖಿಯಾಗಿ ನಿಮಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಇಂದು ನಿಮ್ಮಲ್ಲಿ ಮಾನಸಿಕ ಅಸ್ಥಿರತೆಯನ್ನು ಉಂಟುಮಾಡಬಹುದು ಮತ್ತು ಇಂದು ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ನೀವು ಅತ್ಯಂತ ಒರಟಾಗಿ ವರ್ತಿಸಬಹುದು ಮತ್ತು ಅಗತ್ಯಕ್ಕಿಂತ ಹೆಚ್ಚೇ ಮಾತಿನಲ್ಲಿ ತೊಡಗಬಹುದು. ಇದು ನಿಮ್ಮ ಹಳೆಯ ಸ್ನೇಹದಲ್ಲಿ ಬಿಕ್ಕಟ್ಟನ್ನು ಉಂಟುಮಾಡುವ ಸಾಧ್ಯತೆಯಿದೆ. ಇದರಿಂದಾಗಿ ನಂತರ ನೀವು ಪಶ್ಚಾತ್ತಾಪ ಪಡುವಿರಿ. ಆದ್ದರಿಂದ, ನಿಯಂತ್ರಿಸಿ. ನಿಮ್ಮ ಸಮಯವನ್ನು ಪ್ರಾರ್ಥನೆಯಲ್ಲಿ ಕಳೆಯುವಂತೆ.
ತುಲಾ
ಬುಧವಾರ, 16 ಜೂನ್
ಅದೃಷ್ಟ ತುಲಾ ರಾಶಿಗೆ ಒಳ್ಳೆಯ ಸಮಯಗಳು ಮುಂದುವರಿಯಲಿದೆ,ನಿನ್ನೆಯ ಅದ್ಭುತ ತಾರಾಬಲ ಹೊಂದಾಣಿಕೆಯಿಂದ ನೀವು ಗೆಲುವಿನಿಂದಿರುವಿರಿ. ನೀವು ಈಗಾಗಲೇ ಸ್ನೇಹಿತರೊಂದಿಗಿನ, ನಿಮ್ಮ ಕುಟುಂಬದವರೊಂದಿಗಿನ ಅಥವಾ ನಿಮ್ಮ ಇನಿಯನೊಂದಿಗಿನ ಪ್ರಯಾಣವನ್ನು ಆನಂದಿಸುತ್ತಿರಬಹುದು. ಇಲ್ಲದಿದ್ದಲ್ಲಿ, ಸದ್ಯದಲ್ಲಿಯೇ ನಿಮ್ಮ ಜೀವನದ ಪ್ರಯಾಣವನ್ನು ಪ್ರಾರಂಭಿಸುವಿರಿ. ವಿವಿಧ ಕಡೆಗಳಿಂದ ಲಾಭವು ಹರಿದುಬರಲಿದೆ ಮತ್ತು ನಿಮ್ಮ ಹಣಕಾಸು ಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾಗಲಿದೆ. ಗೆಳೆತನವು ಅನ್ಯೋನ್ಯವಾಗಿರುತ್ತದೆ ಮತ್ತು ಅನುಕೂಲಕರವಾಗಿರುತ್ತದೆ ಮತ್ತು ಸ್ನೇಹಿತರಿಗಾಗಿ ವೆಚ್ಚಮಾಡಲು ನೀವು ಹಿಂಜರಿಯುವುದಿಲ್ಲ. ಸ್ನೇಹಿತೆಯರೊಂದಿಗಿನ ಸಂಬಂಧವು ಇನ್ನೂ ಉತ್ತಮ ರೀತಿಯಲ್ಲಿರುತ್ತದೆ. ಅವರಿಂದ ನಿಮಗೆ ಪ್ರಯೋಜನ ಉಂಟಾಗಬಹುದು. ವಿವಾಹ ಸಂಬಂಧ ಅನ್ವೇಷಣೆಯಲ್ಲಿ ತೊಡಗಿರುವವರಿಗೆ ಉತ್ಕೃಷ್ಟ ಸಮಯ. ನೀವು ‘ಒಬ್ಬರನ್ನು’ ಈಗ ಯಾವುದೇ ಸಮಯದಲ್ಲೂ ಭೇಟಿ ಮಾಡಬಹುದು. ಖಾದ್ಯ ಪ್ರಿಯರಿಗೆ ಉತ್ತಮ ಸಮಯ.
ವೃಶ್ಚಿಕ
ಬುಧವಾರ, 16 ಜೂನ್
ಈ ದಿನವು ನಿನ್ನೆಯ ದಿನವನ್ನೇ ಹೋಲುವಂತೆ ಕಂಡುಬರುತ್ತದೆ. ವೈಯಕ್ತಿಕ ಸಂಬಂಧಗಳಲ್ಲಿ, ಗೃಹವಲಯಗಳಲ್ಲಿ ಪ್ರೀತಿ, ಸಾಮರಸ್ಯ ಹಾಗೂ ಕಾರ್ಯ ಸ್ಥಳಗಳಲ್ಲಿ ಸ್ನೇಹಪರ ಮತ್ತು ಅನುಕೂಲಕರ ವಾತಾವರಣವನ್ನು ವರಿಷ್ಠರ ಸಹಕಾರವು ಮುಂದುವರಿಯುತ್ತದೆ ಮತ್ತು ನಿಮ್ಮ ಹೊಸ ಯೋಜನೆಗಳಿಗೆ ಮತ್ತು ಐಡಿಯಾಗಳಿಗೆ ನಿಮ್ಮ ಮೇಲಾಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಕೊನೆಗೆ ನೀವೇ ಭಾನುವಾರ ಕೆಲಸ ಮಾಡಬೇಕಾಗಿ ಬಂದರೂ ನೀವು ಸಂತೋಷವಾಗಿಯೇ ಇರುತ್ತೀರಿ. ಸಂಜೆಯ ಎಲ್ಲಾ ನಿಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ ಮತ್ತು ಸಂಜೆಯ ಖುಷಿಭರಿತ ತಿರುಗಾಟವನ್ನು ಆನಂದಿಸುವಿರಿ.ನಿಮ್ಮ ಸಾಮಾಜಿಕ ಸ್ಥಾನಮಾನ ವರ್ಧಿಸಲಿದೆ ಮತ್ತು ಗೌರವ ವೃದ್ಧಿಯನ್ನು ನೀವು ಆನಂದಿಸುವಿರಿ. ನಿಮ್ಮ ಕಣ್ಣು ಆನಂದಬಾಷ್ಪದಿಂದ ತುಂಬಿರುತ್ತದೆ ಮತ್ತು ಮಕ್ಕಳ ಯಶಸ್ಸಿನ ಸುದ್ಧಿಯ ಆಗಮನದಿಂದ ಜೀವನವೆಂಬ ಹಾದಿಗೆ ನಿಮ್ಮ ಮನಸ್ಸು ಹತ್ತಿರವಾಗುತ್ತದೆ.
ಧನು
ಬುಧವಾರ, 16 ಜೂನ್
ನಿಮ್ಮ ಆರೋಗ್ಯ ಮತ್ತು ದೈಹಿಕ ಸ್ಥಿತಿಯ ಮೇಲೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ ಮತ್ತು ಈಗ ಹೆಚ್ಚು ಗಮನಹರಿಸಬೇಕಾಗುತ್ತದೆ,ನೀವು ಅದರ ಬಗ್ಗೆ ಹೆಚ್ಚು ವಿಶ್ರಾಂತಿ, ಕಾಳಜಿ, ಗಮನ ವಹಿಸಬೇಕು ಎಂಬುದನ್ನು ನಿಮ್ಮ ದೇಹವು ಈಗಾಗಲೇ ನಿಮಗೆ ಸೂಚನೆ ನೀಡಿರಬಹುದು. ನಿದ್ರಾಹೀನತೆ, ಆತಂಕ, ಒಮ್ಮೆಗೆ ಉಂಟಾಗುವ ಉಷ್ಣ ಸಂವೇದನೆ ಅಥವಾ ಇತರ ಯಾವುದೇ ಮುನ್ಸೂಚನೆಗಳಿದ್ದರೂ ಅದನ್ನು ಕಡೆಗಣಿಸಬೇಡಿ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನೀವು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುತ್ತೀದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಶ್ರಮನೀಡುವಂತಹ ಯಾವುದೇ ಕಾರ್ಯದಿಂದ ದೂರವಿರಿ.ಆದ್ದರಿಂದ ಭಾನುವಾರದ ವಿಹಾರವನ್ನು ಮುಂದೂಡಿ ಮತ್ತು ಋಣಾತ್ಮಕ ಪ್ರಭಾವವನ್ನು ಹೊಂದಿರುವ ವ್ಯಕ್ತಿಗಳೊಂದಿಗಿನ ವಾಗ್ವಾದದಿಂದ ದೂರ ಉಳಿಯಿರಿ. ಭಾನುವಾರ ಮನೆಯಿಂದಲೇ ಮಾಡುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲೇಬೇಡಿ. ನೀವು ಸೇವಿಸುವ ಆಹಾರ ವಿಧಾನದ ಬಗ್ಗೆ ಹೆಚ್ಚು ಗಮನಹರಿಸಿ.
ಮಕರ ಬುಧವಾರ, 16 ಜೂನ್
ನಿಮ್ಮ ಖರ್ಚುವೆಚ್ಚಗಳು ಅನಿರೀಕ್ಷಿತವಾಗಿ ವರ್ಧಿಸಲಿದೆ,ನೀವು ವಾರದ ದಿನಸಿ ಲೆಕ್ಕಕ್ಕಿಂತ ಅಧಿಕವಾಗಿ ಖರ್ಚು ಮಾಡುತ್ತೀರಿ ಮತ್ತು ಮತ್ತು ನಿಮ್ಮ ಮಳಿಗೆ ಟ್ರೋಲಿಯು ಸತ್ವಯುತ ತಿನಿಸುಗಳಿಂದ ತುಂಬಿರುತ್ತದೆ. ಅಥವಾ ನೀವು ಭಾನುವಾರದ ವಿಹಾರಕ್ಕೆ ಯೋಜನೆ ರೂಪಿಸಿದ್ದರೆ ದಿನದಂತ್ಯದಲ್ಲಿ ನೀವು ಯೋಜಿಸಿರುವುದಕ್ಕಿಂತ ಹೆಚ್ಚೇ ಖರ್ಚು ಮಾಡಬಹುದು. ಯಾವುದೇ ರೀತಿಯಲ್ಲೇ ಆದರೂ, ದುಂದುವೆಚ್ಚವನ್ನು ತಪ್ಪಿಸಲು ಬಯಸಿದ್ದರೆ, ಆದಷ್ಟು ಎಚ್ಚರವಹಿಸಿ ಮತ್ತು ಅನಗತ್ಯ ಖರೀದಿಯ ಪ್ರಚೋದನೆಯನ್ನು. ಹೊರ ಹೋಗಿ ತಿನ್ನುವಾಗ ನೀವು ಏನು ತಿನ್ನುತ್ತೀರೋ ಅದರ ಬಗ್ಗೆ ಜಾಗ್ರತೆವಹಿಸಿ.ನೀವು ಕೋಪ ಮತ್ತು ಋಣಾತ್ಮಕ ಚಿಂತನೆಗಳನ್ನು ಹೊಂದುವ ಸಾಧ್ಯತೆಯಿದೆ.ಅವುಗಳಿಂದ ದೂರ ಉಳಿಯಿರಿ. ವೃತ್ತಿಕ್ಷೇತ್ರದ ಸಂಬಂಧಗಳಲ್ಲಿ ಪ್ರಶಾಂತತೆಯು ಕಂಡುಬರುತ್ತದೆ ಆದರೂ, ಉದ್ಯಮ ಪಾಲುದಾರರೊಂದಿಗಿನ ವಾಗ್ವಾದವನ್ನು ತಪ್ಪಿಸಿ ಇಲ್ಲವಾದಲ್ಲಿ ಆಂತರಿಕ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ..
ಕುಂಭ
ಬುಧವಾರ, 16 ಜೂನ್
ಇಂದು ಹಾಯಾದ ಮತ್ತು ಕನಸಿನ ರೀತಿಯ ದಿನವನ್ನು ನೀವು ಪ್ರೀತಿ, ಪ್ರಣಯ ಮತ್ತು ವ್ಯಾಮೋಹಗಳಲ್ಲಿ ನೀವು ವಿಫುಲ ಅವಕಾಶ ಕಂಡುಕೊಳ್ಳುವಿರಿ. ಆನಂದಿಸಿ. ಹೃದಯ ಮತ್ತು ಮೈತ್ರಿಗೆ ಸಂಬಂಧಿಸಿದ ವಿಷಯಗಳಿಗೆ ಇದು ಉತ್ಕೃಷ್ಟ ಸಮಯ. ವಿಷಯಗಳು ಕಾರ್ಯಕ್ಷೇತ್ರದವರೆಗೂ ವಿಸ್ತರಣೆಗೊಳ್ಳುತ್ತವೆ ಮತ್ತು ಉದ್ಯಮ ಪಾಲುದಾರಿಕೆಗೂ ಇದು ಅದೃಷ್ಟವಾಗಿ ಪರಿಣಮಿಸುತ್ತದೆ. ನೀವು ಕಾರ್ಯತಃ ಹರ್ಷ, ಆತ್ವವಿಶ್ವಾಸದಿಂದ ತುಂಬಿತುಳುಕುತ್ತಿದ್ದೀರಿ ಮತ್ತು ಈ ಸಮಯದಲ್ಲಿ ನಿಮ್ಮ ಎಲ್ಲಾ ವ್ಯವಹಾರಗಳಲ್ಲೂ ಇದು ಪ್ರತಿಬಿಂಬಿಸುತ್ತದೆ. ನೀವು ಪ್ರಯಾಣ ಮಾಡಲು ಯೋಜನೆ ರೂಪಿಸಬಹುದು ಮತ್ತು ಇಂದು ಸಂತೋಷವಾಗಿ ಫಲಕಾರಿಯಾಗಬಹುದು.ನೀವು ಚೆನ್ನಾಗಿ ಸಿಂಗರಿಸಿ ಸುವಾಸನೆ ಹಾಗೂ ಸ್ವಾದಿಷ್ಟವಾದ ತಿನಿಸುಗಳನ್ನು ಹೊಂದಿರುವ ಔತಣಕೂಟಕ್ಕೆ ಹೋಗುವಿರಿ. ವಾಹನ ಖರೀದಿಗೆ ಇದು ಸೂಕ್ತ ಸಮಯ.
- ಮೀನ
ಬುಧವಾರ, 16 ಜೂನ್
ಇಂದು ನಿಮಗೆ ಅದೃಷ್ಟಕರ ದಿನವಾಗಿದೆ,ನೀವು ನಿಮ್ಮ ಮನೋಬಲವನ್ನು ಕಾಣುತ್ತೀರಿ ಮತ್ತು ಮುಂದೆಯೂ ದೃಢಗೊಳ್ಳಲು ನಿರ್ಧರಿಸುತ್ತೀರಿ. ನೀವು ಎಂತಹ ದೃಢಸಂಕಲ್ಪವನ್ನು ಹೊಂದುವಿರಿ ಎಂದರೆ ನಿಮ್ಮ ಆತ್ಮೀಯ ಸ್ನೇಹಿತರೂ ಬೆರಗಾಗುತ್ತಾರೆ. ಆದರೆ, ಜನ ನಿಮ್ಮ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ. ಮೃದು ಮತ್ತು ಕನಸಿನಲ್ಲಿ ವಿಹರಿಸುವ ಮೀನ ರಾಶಿಯವರಿಂದ ಇದು ಸಾಧ್ಯವಿದೆ. ನೀವು ನಿಮ್ಮೊಳಗೆ ಆರೋಗ್ಯಕರ ಭಾವನೆಯನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಆರೋಗ್ಯ ಸಂಬಂಧಿ ಯೋಜನೆಗಳನ್ನು ಹೊಸ ಉತ್ಸಾಹದೊಂದಿಗೆ ಅನುಸರಿಸುತ್ತೀರಿ. ಗೃಹಕ್ಷೇತ್ರದಲ್ಲಿ ಎಲ್ಲವೂ ಪ್ರಶಾಂತ ರೀತಿಯಲ್ಲಿರುತ್ತದೆ. ನಿಮ್ಮ ಮಾತು ಮತ್ತು ಕೋಪದ ಮೇಲೆ ಹಿಡಿತವಿರಲಿ. ಯಾವುದರಲ್ಲೂ ಅತಿರೇಕ ಬೇಡ. ತವರು ಮನೆಯಿಂದ ಶುಭಸುದ್ದಿಯನ್ನು ಮತ್ತು ಸಹೋದ್ಯೋಗಿಗಳಿಂದ ಸಹಕಾರವನ್ನು ನಿರೀಕ್ಷಿಸಿ.
ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com