ನಿತ್ಯವಾಣಿ ಗುರುವಾರದ ರಾಶಿ ಭವಿಷ್ಯ 🙏🙏

ನಿತ್ಯವಾಣಿ ಗುರುವಾರದ ರಾಶಿ ಭವಿಷ್ಯ 🙏🙏
ಮೇಷ
ಗುರುವಾರ, 17 ಜೂನ್
ಅದ್ಭುತವಲ್ಲದ ಮತ್ತು ನೀರಸ ದಿನವು ನಿಮ್ಮದಾಗಲಿದೆ, ಸಣ್ಣ ವ್ಯಾಧಿಗಳು ನಿಮಗೆ ಕಿರಿಕಿರಿಯುಂಟುಮಾಡಬಹುದು ಮತ್ತು ನಿಮ್ಮನ್ನು ನಿರುತ್ಸಾಹ, ಅಸಮರ್ಥ ಮತ್ತು ಆಯಾಸದಿಂದಿರುವಂತೆ ಮಾಡಬಹುದು. ನಿಮ್ಮ ದೈನಂದಿನ ವ್ಯಾಯಾಮವನ್ನು ಇನ್ನಷ್ಟು ಹೆಚ್ಚಿಸಬೇಡಿ. ಈಗಾಗಲೇ ನೀವು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದೀರಿ. ಬದಲಾಗಿ ವಿಶ್ರಾಂತಿ ಮತ್ತು ವಿರಾಮವು ಅಗತ್ಯ ಎಂಬುದನ್ನು ತಿಳಿದುಕೊಳ್ಳಿ. ಪ್ರಯಾಣವನ್ನು ಮುಂದೂಡಿ ಮತ್ತು ಕೆಲಸವನ್ನು ಪೂರ್ಣಗೊಳಿಸಲು ಅತ್ತಿಂದಿತ್ತ ಓಡಾಡುವ ಬದಲು ವಿಶ್ರಾಂತಿ ತೆಗೆದುಕೊಳ್ಳಿ. ಕೆಲಸವು ಎಂದೂ ಮುಗಿಯುವುದಿಲ್ಲ. ನೀವು ಮಾನಸಿಕವಾಗಿ ಚಿಂತಾಮಗ್ನರಾಗುವ ಮತ್ತು ಬೇಸರದಿಂದಿರುವ ಸಾಧ್ಯತೆಯಿರುವುದರಿಂದ ಅಗತ್ಯವಿದ್ದಷ್ಟು ಬಿಡುವನ್ನು ತೆಗೆದುಕೊಳ್ಳಿ. ಮನೆಯಲ್ಲಿ ಪ್ರೀತಪಾತ್ರರೊಂದಿಗಿನ ಸಣ್ಣ ಜಗಳವು ನಿಮಗೆ ಕಿರಿಕಿರಿಯನ್ನುಂಟುಮಾಡಬಹುದು. ಈಗ ಹಠಮಾರಿತನ ಹೊಂದುವುದರಲ್ಲಿ ಯಾವುದೇ ಅರ್ಥವಿಲ್ಲ. ನಂತರ ನಿಮ್ಮ ಅಂಶಗಳನ್ನು ಪ್ರೋತ್ಸಾಹಿಸಲು ವಿಫಲರಾದಾಗ ನೀವು ಬೇಸರಪಡುತ್ತೀರಿ.ನಿಮ್ಮ ಮಕ್ಕಳು ಮತ್ತು ಅವರದೇ ಆರೋಗ್ಯದ ಬಗ್ಗೆ ನೀವು ವ್ಯಾಕುಲತೆಗೆ ಒಳಗಾಗುವಿರಿ. ಜಾಗ್ರತೆಯಿಂದಿರಿ.

ವೃಷಭ
ಗುರುವಾರ, 17 ಜೂನ್ : ಈ ದಿನವು ಸಾಮಾನ್ಯ ಪ್ರಭಾವವನ್ನು ಹೊಂದಿರುತ್ತದೆ,ಆದರೆ ಉತ್ತಮ ವಿಚಾರವೆಂದರೆ ನೀವು ಎಷ್ಟು ಉತ್ತಮವಾಗಿಸುತ್ತೀರೋ ಅಷ್ಟು ಉತ್ತಮವಾಗಿರುತ್ತದೆ. ನಿಮ್ಮ ಹಠಮಾರಿತನ, ತೀವ್ರ ದೃಢತೆಯಿಂದ ಇದು ಕಷ್ಟಕರವೆನಿಸುವುದಿಲ್ಲ. ನೀವು ಹೆಚ್ಚು ಪ್ರಯತ್ನಪಟ್ಟಲ್ಲಿ ಹೆಚ್ಚು ಪ್ರತಿಫಲ ಪಡೆಯುವಿರಿ. ಕನಿಷ್ಟಪಕ್ಷ ಗುರಿಯಿಲ್ಲದೆ ಕೆಲಸ ಮಾಡುವುದಕ್ಕಿಂತ ಇದು ಉತ್ತಮ.ದೃಢ ನಿಲುವನ್ನು ತಾಳಿ ಮತ್ತು ಆತ್ಮವಿಶ್ವಾಸದ ಹೆಜ್ಜೆಯಿಡಿ. ಲಾಭ ಮತ್ತು ವಿಶೇಷ ಸೌಕರ್ಯಗಳು ನಿಮ್ಮ ಪಿತೃಮೂಲದಿಂದ ಹರಿದುಬರಲಿದೆ. ನಿಮ್ಮ ತಂದೆಯೊಂದಿಗೆ ಆತ್ಮೀಯ ಸಂವಾದವನ್ನು ನಡೆಸಬಹುದು ಮತ್ತು ಇದು ನಿಮ್ಮನ್ನು ಸಂತೋಷದಲ್ಲಿಸುತ್ತದೆ. ನೀವೇ ತಂದೆಯಾಗಿದ್ದಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಯೋಚಿಸಿ ಖರ್ಚುಮಾಡಿ. ಕ್ರೀಡೆ ಹಾಗೂ ಕ್ರೀಡಾಳುಗಳಿಗೆ ಉತ್ತಮ ದಿನ. ನೀವು ಒಬ್ಬರಾಗಿದ್ದಲ್ಲಿ ಇಂದು ಉಜ್ವಲಪ್ರಭೆಯ ದಿನ.

ಮಿಥುನ
ಗುರುವಾರ, 17 ಜೂನ್
ಮಿಥುನ ರಾಶಿಯವರಿಗೆ ಒಟ್ಟಾರೆಯಾಗಿ ಉತ್ತಮ ದಿನವು ಕಾದಿದೆ. ಯೋಚಿಸಿ ಮತ್ತು ಜಾಗರೂಕತೆಯಿಂದ ಬಂಡವಾಳ ಹೂಡಿ. ಅತ್ಯಂತ ಅಪಾಯಕಾರಿ ಎನಿಸುವಲ್ಲಿ ಬಂಡವಾಳ ಹೂಡುವುದನ್ನು ತಪ್ಪಿಸಿ. ಲಾಭಗಳು ಹೇರಳವಾಗಿದ್ದ ವಿಚಾರವಾದರೂ ಸರಿ ಪ್ರಮಖ ನಿರ್ಧಾರಗಳನ್ನು ತಪ್ಪಿಸಿ. ಇಲ್ಲವಾದಲ್ಲಿ, ನಿಮ್ಮ ದಿನ ಶಾಂತಿ ಹಾಗೂ ಅದೃಷ್ಟವನ್ನು ಒಯ್ಯಬಹುದು. ತೀವ್ರತೆಯಿಲ್ಲ, ಆತುರವಿಲ್ಲ ಕೇವಲ ನಿಮ್ಮ ಕುಟುಂಬ ಸದಸ್ಯರು , ಸ್ನೇಹಿತರು ಅಥವಾ ಪ್ರೀತಿಪಾತ್ರರೊಂದಿಗೆ ಹರ್ಷ, ಮುಚ್ಚಮರೆಯಿಲ್ಲದ ಮಾತುಕತೆ ಮತ್ತು ಹಿತಕರ ಅನುಭವ.ನೀವು ಅತ್ಯಂತ ಕ್ರಿಯಾಶೀಲ ಹಾಗೂ ಉತ್ಸಾಹಿಗಳಾಗಿರುತ್ತೀರಿ ಮತ್ತು ಹೊಸ ಕಾರ್ಯವನ್ನು ಪ್ರಾರಂಭಿಸುವ ಬಗ್ಗೆ ಆಲೋಚನೆ ನಡೆಸುತ್ತೀರಿ. ಮುಂದಕ್ಕೆ ಸಾಗಿ , ನೀವು ನಿಮ್ಮದೇ ಹಣಬರಹವನ್ನು ಬರೆಯುತ್ತೀರಿ, ಪ್ರತಿಸ್ಪರ್ಧಿಗಳನ್ನು ಸೋಲಿಸಿ ಮತ್ತು ನಿಮ್ಮ ಅದೃಷ್ಟವನ್ನು ಇನ್ನಷ್ಚು ಹೆಚ್ಚಿಸಿಕೊಳ್ಳಿ. ಆದರೆ,ನೀವು ನಿಮ್ಮ ಚಂಚಲ ಮನಸ್ಸಿನ ಬಗ್ಗೆ ಜಾಗರೂಕರಾಗಿರಿ.

ಕರ್ಕಾಟಕ
ಗುರುವಾರ, 17 ಜೂನ್
ಕರ್ಕಾಟಕ ರಾಶಿಯವರಿಗೆ ಸಾಮಾನ್ಯ ಮತ್ತು ಸ್ವಾಭಾವಿಕವಾದ ದಿನವು ಕಾದಿದೆ,ನಿಮ್ಮ ಸುತ್ತಲಿರುವ ವಿಚಾರಗಳ ಬದಲಾಗಿ, ನಿಮ್ಮ ಮನಸ್ಸು ನಿಗದಿತ ಅವಧಿಗಿಂತ ಹೆಚ್ಚು ಹೊತ್ತು ಕೆಲಸ ಮಾಡುತ್ತಿರುತ್ತದೆ. ನಿಮ್ಮ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲದಿಂದ ನೀವು ಸಂತೃಪ್ತರಾಗುವುದಿಲ್ಲ. ಅಹಿತಕರ ಹಾಗೂ ಅನ್ಯಮನಸ್ಕರಾಗಿರುತ್ತೀರಿ. ನಿರಾಶಾವಾದದ ಆಲೋಚನೆಗಳಿಂದ ದೂರವಿರಿ. ಇದು ನಿಮ್ಮ ಕುಟುಂಬ ಸಂಘರ್ಷವನ್ನು ತಪ್ಪಿಸಲು ಸಹಾಯವಾಗುತ್ತದೆ. ಹಣಕಾಸು ಮತ್ತು ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ. ಎಡ ಕಣ್ಣಿನ ಕಿರಿಕಿರಿ ಉಂಟಾಗುವಂತಹ ನೋವು ನಿಮಗೆ ಚಿಂತೆಯನ್ನು ತರಬಹುದು. ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ ಆಸಕ್ತರಿಗೆ ಇದು ಅನುಕೂಲಕರ ದಿನವಲ್ಲ. ಪ್ರಯತ್ನಗಳು ನಿಷ್ಫಲವಾಗಬಹುದು. ಅನೈತಿಕ ಚಟುವಟಿಕೆಗಳಿಂದ ದೂರವಿರಿ ಇಲ್ಲವಾದಲ್ಲಿ ಅವು ಪಶ್ಚಾತ್ತಾಪ ಮತ್ತು ಬೇಸರದಿಂದ ನಿಮ್ಮನ್ನು ಕಾಡಬಹುದು. ನಿಮ್ಮಲ್ಲಿ ಈಗಾಗಲೇ ಪಾಪಪ್ರಜ್ಞೆ ಕಾಡುತ್ತಿದ್ದಲ್ಲಿ. ಶಾಂತರಾಗಿರಿ ಮತ್ತು ಆರಾಮದಿಂದಿರಿ.

ಸಿಂಹ
ಗುರುವಾರ, 17 ಜೂನ್
ನಿಮಗೆ ನಿಮ್ಮ ಅರ್ಹತೆಯಲ್ಲಿ ನಂಬಿಕೆಯಿದ್ದಲ್ಲಿ ಎಲ್ಲವೂ ಸರಿಯಾದ ರೀತಿಯಲ್ಲೇ ಸಾಗುತ್ತದೆ. ಎಲ್ಲಾ ವ್ಯವಹಾರಗಳಲ್ಲಿ ನಿಮ್ಮ ಅತ್ಯುತ್ತಮ ಆತ್ಮವಿಶ್ವಾಸವನ್ನು ಪ್ರದರ್ಶಿಸುವುದರಿಂದ ಈ ದಿನ ಅದೇ ನಡೆಯಲಿದೆ, ದೃಢ ನಿರ್ಧಾರವು ಎಲ್ಲಾ ಕಷ್ಟಕರ ಕಾರ್ಯಗಳನ್ನೂ ಸುಲಭವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಸರಕಾರಿ ಸಂಬಂಧ ವ್ಯವಹಾರಗಳಿಂದ ಅಥವಾ ಅಧಿಕಾರ ಸಂಬಂಧಿ ಕಾರ್ಯಗಳಿಂದ ನಿಮಗೆ ಪ್ರಯೋಜನ ಉಂಟಾಗಬಹುದು. ಈ ದಿನವು ನಿಮ್ಮ ಕಾರ್ಯವನ್ನು ಪ್ರಸ್ತುತಿಪಡಿಸಲು, ನಿಮ್ಮ ವಿಷಯವನ್ನು ಜಾಹೀರುಪಡಿಸಲು ಅಥವಾ ಟೆಂಡರ್‌ಗೆ ಸ್ಪರ್ಧಿಸಲು ಉತ್ತಮ ದಿನ. ನಿಮ್ಮ ಘನತೆ ಮತ್ತು ಅಧಿಕಾರದಲ್ಲಿ ವೃದ್ಧಿಯುಂಟಾಗಬಹುದು ಮತ್ತು ತಂದೆಯ ಕಡೆಯಿಂದ ನಿಮಗೆ ಲಾಭ ಉಂಟಾಗಲಿದೆ. ಆದರೆ ಇವುಗಳಿಂದಾಗಿ ನಿಮ್ಮ ದುರಹಂಕಾರ ಮಿತಿಮೀರದಂತೆ ನೋಡಿಕೊಳ್ಳಿ. ಅಹಂಕಾರ ಮತ್ತು ಸಿಡುಕು ಸ್ವಭಾವದಿಂದಿರಬೇಡಿ. ನಿಮ್ಮ ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ಎಚ್ಚರವಹಿಸಿ.

ಕನ್ಯಾ
ಗುರುವಾರ, 17 ಜೂನ್
ಯಾರೇ ಆಗಿರಲಿ ಅಹಂಕಾರ ಮತ್ತು ಸಿಡುಕಿನಿಂದ ಕೂಡಿರುವುದು ಸಮ್ಮತವಲ್ಲ ಮತ್ತು ಈ ಸತ್ಯವು ನಿಮಗೂ ಅನ್ವಯಿಸುತ್ತದೆ, ಯಾಕೆ ಈ ಸಲಹೆ? ಯಾಕೆಂದರೆ ನಿಮ್ಮನ್ನು ಕೆರಳಿಸಬಲ್ಲ ಅನೇಕ ಅಹಿತಕರ ಘಟನೆಗಳು, ವಿಚಾರಗಳಿಂದ ಈ ದಿನವು ಸಾಗುತ್ತದೆ. ನೀವು ಆತ್ಮವಿಶ್ವಾಸವನ್ನು ಹೊಂದಿದ್ದೀರಿ ಎಂಬುದು ನಿಜಕ್ಕೂ ಅದ್ಭುತ. ಆದರೆ, ದುರಾಭಿಮಾನವು ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸುತ್ತದೆ ಮತ್ತು ನಿಮ್ಮ ಆತ್ಮೀಯ ಸ್ನೇಹಿತರನ್ನೂ ನಿಮ್ಮಿಂದ ದೂರ ಮಾಡುತ್ತದೆ. ಕಾನೂನು ಸಂಬಂಧಿ ಪ್ರಕ್ರಿಯೆಗಳನ್ನು ಮುಂದೂಡಿ ಮತ್ತು ವಿಚಾರಾಸಕ್ತ ಮತ್ತು ಶಾಂತಿಯಿಂದ ಉಳಿಯಲು ಗರಿಷ್ಠ ಪ್ರಯತ್ನ ಮಾಡಿ. ಖರ್ಚುವೆಚ್ಚಗಳು ಹೆಚ್ಚಾದರೂ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿಗೆ ವೆಚ್ಚ ಮಾಡುವುದನ್ನು ತಪ್ಪಿಸಬೇಡಿ. ಇದು ನಿಮ್ಮ ಮನಸ್ಸಿಗೆ ಸಮಾಧಾನವನ್ನು ತರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ. ಕೆಲಸದ ವೇಳೆ ನಿಮ್ಮ ಸಹೋದ್ಯೋಗಿಗಳನ್ನು ಜಾಗರೂಕತೆಯಿಂದ ನಿಭಾಯಿಸಿ.

ತುಲಾ
ಗುರುವಾರ, 17 ಜೂನ್
ಅದೃಷ್ಟ ಮತ್ತು ಸುಯೋಗದ ದಿನವು ನಿಮಗಾಗಿ ಕಾದಿದೆ. ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ನೀವು ಏನೇ ಮಾಡಿದರೂ ಅದರಲ್ಲಿ ನೀವು ಅದೃಷ್ಟವನ್ನು ಪಡೆಯುವಿರಿ, ಇಂದು ನೀವು ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ ಮತ್ತು ಸಣ್ಣ ಸಂತೋಷಭರಿತ ಪ್ರವಾಸಕ್ಕಾಗಿ ಪ್ರವಾಸಿ ಸ್ಥಳಗಳಿಗೆ ತೆರಳುವ ಯೋಜನೆ ರೂಪಿಸಬಹುದು. ಅಥವಾ ನಿಮ್ಮ ಒಬ್ಬ ಸ್ನೇಹಿತನ ಮನೆಯಲ್ಲಿ ಸ್ನೇಹಕೂಟ ಅಥವಾ ಸತ್ಕಾರಕೂಟ ಆಯೋಜಿಸಬಹುದು. ಮುಂದಕ್ಕೆ ಸಾಗಿ, ಆನಂದಿಸಿ. ನೀವು ಅಲ್ಲಿ ನಿಮ್ಮ ಸ್ನೇಹಿತೆಯರನ್ನು ಭೇಟಿ ಮಾಡಬಹುದು ಮತ್ತು ಅದು ನಿಮಗೆ ಪ್ರಯೋಜನವನ್ನು ತರುತ್ತದೆ. ವ್ಯವಹಾರವನ್ನು ಮೋಜಿನೊಂದಿಗೆ ಮಿಶ್ರಗೊಳಿಸಲು ಉತ್ತಮ ಸಮಯ. ಉದ್ಯಮಿಗಳು ಭಾರೀ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಧನ ಮತ್ತು ಇನಿಯ ಎರಡೂ ವಿಚಾರಗಳಲ್ಲೂ ಗ್ರಹಗತಿಗಳು ಅನುಕೂಲಕರವಾಗಿವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಎಲೆಕ್ಟ್ರಿಕ್ ಕೆಮೆಸ್ಟ್ರಿಯು ಅತ್ಯುತ್ತಮವಾಗಿರುತ್ತದೆ.

ವೃಶ್ಚಿಕ
ಗುರುವಾರ, 17 ಜೂನ್
ಪ್ರಸಕ್ತ ಅವಧಿಯಲ್ಲಿನ ಶುಭಪ್ರದ ಗ್ರಹಗತಿಗಳಿಂದಾಗಿ ನಿಮ್ಮ ಸಂಸಾರ ಜೀವನ ಅವಿಸ್ಮರಣೀಯ ವೃದ್ಧಿಯನ್ನು ಕಾಣಲು ಸಿದ್ಧವಾಗಿದೆ, ವೈವಾಹಿಕ ಸಂತೋಷವನ್ನು ಆನಂದಿಸುವಿರಿ ಮತ್ತು ನಿಮ್ಮ ಸಂಗಾತಿಯೊಂದಿಗಿನ ಅನ್ಯೋನ್ಯತೆಯು ವೃದ್ಧಿಸಲಿದೆ. ಮಕ್ಕಳ ಸಾಧನೆಯ ಬಗ್ಗೆ ನೀವು ರೋಮಾಂಚನಗೊಳ್ಳುವಿರಿ. ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಕಾರ್ಯಕ್ಷೇತ್ರದಲ್ಲೂ ಗ್ರಹಗತಿಗಳು ಅನುಕೂಲಕರವಾಗಿರುತ್ತದೆ ಮತ್ತು ಕಾರ್ಯ ಸ್ಥಳದಲ್ಲಿ ನೀವು ಶ್ಲಾಘನೆ, ಲಾಭ, ಬಡ್ತಿ ಪಡೆಯಬಹುದು ಮತ್ತು ನಿಮ್ಮ ಸ್ಥಾನಮಾನ ಹೆಚ್ಚಬಹುದು. ಆರ್ಥಿಕ ವಿಚಾರಗಳಿಗೆ ಉತ್ತಮ ಸಮಯ. ಉದ್ಯಮಿಗಳು ವ್ಯಾಪಾರದ ಉದ್ದೇಶಕ್ಕಾಗಿ ಪ್ರಯಾಣ ಮಾಡುವ ಸಂಭವವಿದೆ ಮತ್ತು ಇದು ಫಲಪ್ರದವಾಗಿರಲಿದೆ. ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ.

ಧನು
ಗುರುವಾರ, 17 ಜೂನ್
ಪ್ರಸಕ್ತ ಅವಧಿಯಲ್ಲಿನ ಶುಭಪ್ರದ ಗ್ರಹಗತಿಗಳಿಂದಾಗಿ ನಿಮ್ಮ ಸಂಸಾರ ಜೀವನ ಅವಿಸ್ಮರಣೀಯ ವೃದ್ಧಿಯನ್ನು ಕಾಣಲು ಸಿದ್ಧವಾಗಿದೆ,ವೈವಾಹಿಕ ಸಂತೋಷವನ್ನು ಆನಂದಿಸುವಿರಿ ಮತ್ತು ನಿಮ್ಮ ಸಂಗಾತಿಯೊಂದಿಗಿನ ಅನ್ಯೋನ್ಯತೆಯು ವೃದ್ಧಿಸಲಿದೆ. ಮಕ್ಕಳ ಸಾಧನೆಯ ಬಗ್ಗೆ ನೀವು ರೋಮಾಂಚನಗೊಳ್ಳುವಿರಿ. ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಕಾರ್ಯಕ್ಷೇತ್ರದಲ್ಲೂ ಗ್ರಹಗತಿಗಳು ಅನುಕೂಲಕರವಾಗಿರುತ್ತದೆ ಮತ್ತು ಕಾರ್ಯ ಸ್ಥಳದಲ್ಲಿ ನೀವು ಶ್ಲಾಘನೆ, ಲಾಭ, ಬಡ್ತಿ ಪಡೆಯಬಹುದು ಮತ್ತು ನಿಮ್ಮ ಸ್ಥಾನಮಾನ ಹೆಚ್ಚಬಹುದು. ಆರ್ಥಿಕ ವಿಚಾರಗಳಿಗೆ ಉತ್ತಮ ಸಮಯ. ಉದ್ಯಮಿಗಳು ವ್ಯಾಪಾರದ ಉದ್ದೇಶಕ್ಕಾಗಿ ಪ್ರಯಾಣ ಮಾಡುವ ಸಂಭವವಿದೆ ಮತ್ತು ಇದು ಫಲಪ್ರದವಾಗಿರಲಿದೆ. ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ.

ಮಕರ
ಗುರುವಾರ, 17 ಜೂನ್
ವೃತ್ತಿ ಕ್ಷೇತ್ರದಲ್ಲಿ ಎಲ್ಲವೂ ಆರೋಗ್ಯಕರವಾಗಿರುತ್ತದೆ ಆದರೂ ನೀವು ಏನೋ ಗುರಿತಪ್ಪಿದಂತಿರುತ್ತೀರಿ. ಋಣಾತ್ಮಕತೆ ಮತ್ತು ನಿರಾಶಾವಾದದ ಪ್ರಭಾವದಿಂದ ದೂರವಿರಿ.ನೀವು ಅವಿಶ್ರಾಂತರಾಗಿರುತ್ತೀರಿ ಮತ್ತು ವಿಚಾರಗಳನ್ನು ವಾಸ್ತವತೆಯಿಂದ ಹೊರಕ್ಕೆ ತರುವ ಪ್ರವೃತ್ತಿಯನ್ನು ನೀವು ಹೊಂದಿರುತ್ತೀರಿ.ಉತ್ಸಾಹದಿಂದಿರಿ ಎಲ್ಲವೂ ಸರಿಯಾಗಿಯೇ ಸಾಗಲಿದೆ. ನೀವು,ಮತ್ತೊಮ್ಮೆ ನಿಮ್ಮಲ್ಲಿರುವ ಸ್ವವಿನಾಶಕಾರಿ ಸ್ಥಿತಿಯಲ್ಲಿ ಒಬ್ಬರಾಗಿದ್ದೀರಿ. ನೀವು ನಿಮ್ಮ ಕಾರ್ಯದಲ್ಲಿ ದಕ್ಷ ಹಾಗೂ ಚುರುಕಿನಿಂದ ಕೂಡಿರುತ್ತೀರಿ ಮತ್ತು ಅದಕ್ಕಾಗಿ ಜನರಿಂದ ಪ್ರಶಂಸೆಗಳನ್ನು ಪಡೆಯುತ್ತೀರಿ. ಕಚೇರಿ ವಿಚಾರಗಳಿಗಾಗಿ ನೀವು ಪ್ರಯಾಣ ತೆರಳುವ ಸಾಧ್ಯತೆಯಿದೆ. ಖರ್ಚುವೆಚ್ಚಗಳು ಅನಿರೀಕ್ಷಿತವಾಗಿ ಹೆಚ್ಚಾಗಲಿವೆ. ಸಂಧಿಗಳಲ್ಲಿ ಸಣ್ಣ ನೋವಿನ ಅನುಭವವಾಗಬಹುದು ಮತ್ತು ಹೆಚ್ಚು ಆಯಾಸಗೊಂಡಿರುವಂತೆ ಅನಿಸಬಹುದು. ನಿಮ್ಮ ಪೋಷಣೆಯ ಬಗ್ಗೆ ಎಚ್ಚರವಹಿಸಿ ಮತ್ತು ಹೊಸ ಯೋಜನೆಗಳ ಪ್ರಾರಂಭವನ್ನು ತಪ್ಪಿಸಿ. ನಿಮ್ಮ ವ್ಯವಹಾರ ಪಾಲುದಾರರೊಂದಿಗೆ ಸಂಘರ್ಷ ಉಂಟಾಗಬಹುದು. ಪ್ರಯತ್ನ ಸಾಗಲಿ.

ಕುಂಭ
ಗುರುವಾರ, 17 ಜೂನ್
ಆತ್ಮವಿಶ್ವಾಸ ಮತ್ತು ಸ್ವಯಂ ನಿರ್ಧಾರದಿಂದ ಮುಂದಕ್ಕೆ ಸಾಗುವಂತೆ ಗ್ರಹಗತಿಗಳು ನಿಮ್ಮನ್ನು ಪ್ರೋತ್ಸಾಹಿಸುತ್ತವೆ.ಮತ್ತು ನೀವು ಹಾಗೆಯೇ ಮಾಡುವಿರಿ,ಇಂದು ನೀವು ಭಾವುಕ ಮತ್ತು ಹಠ ಎರಡನ್ನೂ ಒಮ್ಮೆಗೇ ಹೊಂದುವಿರಿ. ಅಂದರೆ, ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳುತ್ತೀರಿ. ರೊಮ್ಯಾಂಟಿಕ್ ಸಂಬಂಧವು ನಿಮ್ಮನ್ನು ಉತ್ಸಾಹದಲ್ಲಿರಿಸುತ್ತದೆ ಮತ್ತು ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುತ್ತದೆ. ಸುಂದರ ಉಡುಪುಗಳು, ರುಚಿಕರ, ಸ್ವಾದಿಷ್ಟ ಭೋಜನ, ಸಣ್ಣ ಪ್ರವಾಸ ಮತ್ತು ಒಬ್ಬರಿಗೊಬ್ಬರ ಸಮಾಧಾನ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಖುಷಿಯಲ್ಲಿ ತೇಲಿಹೋಗುವಂತ ಮಾಡುತ್ತದೆ. ವಿವಾಹಿತರಿಗೆ ದಾಂಪತ್ಯ ಸಂತೋಷವು ಕಾದಿದೆ. ಇತರರು ಬಹು ಸಂಸ್ಕೃತಿ ಸಂವಾದ ಮತ್ತು ಸ್ನೇಹದಿಂದ ಪ್ರಯೋಜನ ಪಡೆಯಬಹುದು ಮತ್ತು ಅದೊಂದು ಆಸಕ್ತಿಕರ ವಿಷಯವಾಗಿ ಪರಿವರ್ತನೆಗೊಳ್ಳಬಹುದು. ನಿಮ್ಮ ಸಾಮಾಜಿಕ ನಿಲುವು ವೃದ್ಧಿಗೊಳ್ಳುವುದರಿಂದ ಮತ್ತು ವ್ಯವಹಾರ ಪಾಲುದಾರಿಕೆಯು ಶುಭಪ್ರದವಾಗಿರುವುದರಿಂದ ಕೆಲಸಕ್ಕೆ ಸಂಬಂಧಿಸಿದಂತೆಯೂ ಉತ್ತಮ ದಿನ.

ಮೀನ
ಗುರುವಾರ, 17 ಜೂನ್
ಗ್ರಹಗತಿಗಳ ಹೊಂದಾಣಿಕೆಯು ತೊಂದರೆಯಿಲ್ಲದ ಮತ್ತು ಪ್ರೋತ್ಸಾಹಭರಿತವಾಗಿರುವಂತೆ ಕಂಡುಬರುತ್ತದೆ,ನೀವು ಲವಲವಿಕೆಯ ಹೆಜ್ಜೆಯೊಂದಿಗೆ, ಹೃದಯದ ಹಾಡಿನೊಂದಿಗೆ ಆತ್ಮವಿಶ್ವಾಸದಿಂದ ಮುಂದಕ್ಕೆ ಸಾಗಿದರೆ ಎಲ್ಲವೂ ಹರ್ಷದ ವಾತಾವರಣವನ್ನು ಹೊಂದಿರುತ್ತದೆ. ಇಂದು ನೀವು ಹೊಂದುವ ಕ್ಷಿಪ್ರ ನಿರ್ಧಾರ ಮತ್ತು ನಿಷ್ಕರುಣೆಯ ವರ್ತನೆಯಿಂದ ನೀವು ನಿಮ್ಮ ಬಗ್ಗೆಯೇ ಆಶ್ಚರ್ಯಪಡಬಹುದು. ನಿಮ್ಮಲ್ಲಿನ ಪ್ರಸಕ್ತ ಉತ್ಸಾಹಿ ಸ್ಥಿತಿಯಲ್ಲಿ ಯಾರ ಮನಸ್ಸನ್ನೂ ನೋಯಿಸದಂತೆ ಜಾಗರೂಕರಾಗಿರಿ. ಎಲ್ಲರೂ, ವಿಶೇಷವಾಗಿ ನಿಮ್ಮ ಶತ್ರುಗಳು ಖಷಿಯಾಗಿರುವುದಿಲ್ಲ. ಆದರೆ, ವರಿಷ್ಠರಿಂದ ಉತ್ತಮ ಸಹಕಾರ ಮತ್ತು ಕಾರ್ಯದಲ್ಲಿ ಗೆಲುವು ನಿಮಗೆ ಸಿಗಲಿದೆ ಎಂಬುದಾಗಿ ಗ್ರಹಗತಿಗಳು ಭರವಸೆ ನೀಡುತ್ತವೆ. ಮನೆಯ ವಾತಾವರಣದಲ್ಲಿ ಎಲ್ಲವೂ ಶಾಂತವಾಗಿರುತ್ತದೆ. ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ. ಮತ್ತು ದೈನಂದಿನ , ನಿತ್ಯಗಟ್ಟಲೆಯ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ತಾಯಿಯಿಂದ ಶುಭಸುದ್ದಿಯನ್ನು ನಿರೀಕ್ಷಿಸಿ.
ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

 

Leave a Reply

Your email address will not be published.