ಚಿತ್ರದುರ್ಗ, ನಿತ್ಯವಾಣಿ,(ಏ.14) : ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ರವರ ಸಂವಿಧಾನ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಬ್ರಾತೃತ್ವ ಹಾಗೂ ಶೊಷೀತರ ಸಮುದಾಯದ ಪರವಾಗಿ ಹೊರಾಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾದ್ಯಕ್ಷರಾದ ಎ ಮುರಳಿಯವರು ಹೇಳಿದರು 130 ನೇ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ
ನಗರದ ಜಿಲ್ಲಾ ಬಿಜೆಪಿ ಕಚೇಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಸಿ ಮಾತನಾಡಿದರು
ಭಾರತದಲ್ಲಿ ಸಮಾಜಿಕ ಸಮಾನತೆ ಗಾಗಿ ಹೊರಾಡಿದ ಅಗ್ರಗಣ್ಯರಲ್ಲಿ ಡಾ ಅಂಬೇಡ್ಕರ್ ಹೆಸರು ಚಿರಸ್ಮರಣೀಯ ಉಳಿದಿದೆ ಎಂದರೆ ಅದು ತಪ್ಪಾಗಲಾರದು
ಅಸ್ಪೃಶ್ಯತೆ ವಿರುದ್ಧ ಅವರ ಹೋರಾಟ ಅವಿಸ್ಮರಣೀಯ, ಹತ್ತು ಹಲವು ಸೌಲಭ್ಯ ಕ್ಕಾಗಿ ಈ ದೇಶದ ದಲಿತರ ಪರ ದ್ವನಿ ಎತ್ತಿದ ಮಹಾನ್ ನಾಯಕ ಎಂದು ಗುಣಗಾನ ಮಾಡಿದರು
ಚುನಾವಣೆಗಳು ಬಂದಾಗ ಮಾತ್ತ ಕಾಂಗ್ರೆಸ್ ನವರಿಗೆ ಅಂಬೇಡ್ಕರ್ ನೇನಪಾಗುತ್ತಾರೆ ಸಂಸತ್ತು ಚುನಾವಣೆಗಳಲ್ಲಿ ಎರಡು ಭಾರಿ ಅವರನ್ನು ಸೋಲಿಸಿದ ಖ್ಯಾತಿ ಕಾಂಗ್ರೆಸ್ ಪಕ್ಕಕ್ಕೆ ಸಲ್ಲುತದೆ
130 ಕೋಟಿ ಜನ ಸಂಖ್ಯೆ ಇರುವ ಭಾರತದಲ್ಲಿ 130 ಕೋಟಿ ಜನ ಅವರ ಜಯಂತಿ ಆಚರಿಸುತ್ತಾರೆ ಎಂದರೆ ಅವರ ವ್ಯಕ್ತಿತ್ವ ಎಂತಹುದು ಎಂದು ತಿಳಿಯಬೇಕಾಗಿದೆ, ದೇಶದ ಸಂವಿಧಾನಕ್ಕೆ ಡಾ ಅವರು ನೀಡಿದ ಮಹತ್ವ ಅವರು ಹಾಕಿದ ಸಂವಿಧಾನದ ಅಡಿಪಾಯ ದೇಶ ನಿಂತಿದೆ, ದೇಶದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕೆಂಬುದೆ ಅವರ ಸದುದ್ದೇಶವಾಗಿತ್ತು ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗ ದರ್ಶನದಲ್ಲಿ ನಾವು ಮತ್ತು ದೇಶ ಸಾಗಬೇಕಾಗಿದೆ ಎಂದರು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವೀಡ್ ಎಸ್ ಸಿ ಮೊರ್ಚಾದ ಉಪಾಧ್ಯಕ್ಷ ನಾಗರಾಜ್ ಪಾಂಡು ಮಾತನಾಡಿದರು ನಗರ ಅದ್ಯಕ್ಷ ಶಶಿಧರ ನಗರ ಕಾರ್ಯದರ್ಶಿ ಭಾನು,ಉಪಾಧ್ಯಕ್ಷ ಸಂಪತ್ ಕುಮಾರ್ ಜಯಶ್ರೀ ತರುಣ್ ಚಂದ್ರಿಕಾ ಲೋಕನಾಥ್ ನಾಗರಾಜ್ ಬೇಂದ್ರೆ ದಗ್ಗೆ ಶಿವಪ್ರಕಾಶ್, ಶಿವಣ್ಣಾಚಾರ್ ಜಯಶ್ರೀ ಯುವಮೊರ್ ಹನುಮಂತ ಗೌಡ ಯಶವಂತ್ ಕಿರಣ ,ಶಂಭು, ಪ್ರಾಧಿಕಾರದ ಸದಸ್ಯೆ ರೇಖಾ, ಬಸಮ್ಮ ಚಂದ್ರು ನಗಾ ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತಿ ಇದ್ದರು