ಚೀನಾ, ಪಾಕಿಸ್ತಾನದ ಏಜೆಂಟರಂತೆ ವರ್ತಿಸುವ ಕಾಂಗ್ರೆಸ್ ಮುಖಂಡರು: ಬಿ.ಜೆ.ಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಖಂಡನೆ

ನಿತ್ಯವಾಣಿ,ಚಿತ್ರದುರ್ಗ, (ಜೂ.13) : ಕಾಂಗ್ರೆಸ್ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು, ಕಾಂಗ್ರೆಸ್ ಮತ್ತೆಕೇಂದ್ರದಲ್ಲಿಅಧಿಕಾರಕ್ಕೆ ಬಂದರೆಜಮ್ಮು- ಕಾಶ್ಮೀರಕ್ಕೆ 370ನೇ ವಿಧಿಯಡಿ ವಿಶೇಷ ಸ್ಥಾನ ಮಾನಕೊಡುವ ಮಾತನ್ನಾಡಿದ್ದಾರೆ. ಇದು ಕಾಂಗ್ರೆಸ್‍ಟೂಲ್‍ಕಿಟ್‍ನಇನ್ನೊಂದು ಭಾಗವಾಗಿದೆ.ಕಾಂಗ್ರೆಸ್ ಪಕ್ಷ ಮತ್ತು ಅದರ ಮುಖಂಡರು ಚೀನಾ ಹಾಗೂ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ.ಕಾಂಗ್ರೆಸ್‍ನ ಈ ದುರುದ್ದೇಶ ಫಲ ಕೊಡುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಎ. ಮುರುಳಿಅವರು ತಿಳಿಸಿದ್ದಾರೆ.
ದೇಶದ  ಮಣ್ಣು ಪಾಲು ಮಾಡುವುದು, ವಿಶ್ವವಂದ್ಯ ಪ್ರಧಾನಿಯವರ ಘನತೆಗೆಧಕ್ಕೆತರುವದುರುದ್ದೇಶ ಇದರ ಹಿಂದಿದೆ.ಟೂಲ್‍ಕಿಟ್‍ನ ವಿಷಯದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ಸಿಗರ ದುರುದ್ದೇಶವನ್ನುಜನರ ಗಮನಕ್ಕೆ ತಂದಿದೆ.ಇದುಟೂಲ್‍ಕಿಟ್‍ನ ಮುಂದುವರಿದ ಭಾಗ.ಇದು ಸರ್ವಥಾಖಂಡನೀಯಎಂದುಅವರು ತಿಳಿಸಿದ್ದಾರೆ.
ದಿಗ್ವಿಜಯ್ ಸಿಂಗ್ “ಕ್ಲಬ್‍ಹೌಸ್‍ಆ್ಯಪ್” ಮೂಲಕ ಸಂದರ್ಶನ ನೀಡಿದ್ದು, ಆ ಪಕ್ಷವು ಪಾಕಿಸ್ತಾನದ ಪರ ಇರುವುದು ಸ್ಪಷ್ಟಗೊಳ್ಳುತ್ತಿದೆ.ಆದ್ದರಿಂದ ಕಾಂಗ್ರೆಸ್ಸಿನ ಹೆಸರನ್ನುಇಂಡಿಯನ್ ನ್ಯಾಷನಲ್‍ಕಾಂಗ್ರೆಸ್ ಪಾರ್ಟಿ (ಐಎನ್‍ಸಿ) ಹೆಸರಿನ ಬದಲಾಗಿ “ಆ್ಯಂಟಿ ನ್ಯಾಷನಲ್‍ಕ್ಲಬ್‍ಹೌಸ್” (ಎಎನ್‍ಸಿ) ಎಂದು ಬದಲಿಸಿಕೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ.
ವಿದೇಶಿ ಮಾಧ್ಯಮ ಪ್ರತಿನಿಧಿ ಜೊತೆ ಸಂದರ್ಶನದಲ್ಲಿ “ನರೇಂದ್ರ ಮೋದಿ ಅವರಅಧಿಕಾರ ಕಳೆದುಕೊಂಡರೆ” ಎಂಬ ಊಹಾತ್ಮಕ ಪ್ರಶ್ನೆಗೆ ದಿಗ್ವಿಜಯ್ ಸಿಂಗ್ ಅವರು ಈ ಉತ್ತರ ನೀಡಿರುವುದು ಕಾಂಗ್ರೆಸ್‍ನ ಪಾಕ್ ಪರ- ಚೀನಾಪರ ನೀತಿಯ ಪ್ರತಿಬಿಂಬದಂತಿದೆ.ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ಬೇಡ ಎಂಬುದರ ಪ್ರತೀಕದಂತಿದೆ.ಈ ಸಂದರ್ಶನದಲ್ಲಿ ಇದೇ ಪ್ರಶ್ನೆ ಕೇಳಲು ಕಾಂಗ್ರೆಸ್‍ನ ಮುಖಂಡರು ಹೇಳಿರುವಂತಿದೆ ಅಥವಾ ದಿಗ್ವಿಜಯ್ ಸಿಂಗ್ ಅವರೇ ಈ ಪ್ರಶ್ನೆ ಕೇಳಲು ಮೊದಲೇ ಹೇಳಿರುವ ಸಾಧ್ಯತೆಇದೆ.ಇದು ಟೂಲ್‍ಕಿಟ್‍ನ ಮತ್ತೊಂದು ಭಾಗದಂತಿದೆ.ಈ ಕುರಿತುಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಲಿ ಎಂದುಅವರು ಒತ್ತಾಯಿಸಿದ್ದಾರೆ.
ವಿಶ್ವದಾದ್ಯಂತತಮ್ಮಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಪ್ರಧಾನಿಗಳಾದ  ನರೇಂದ್ರ ಮೋದಿಜಿ ಅವರನ್ನುಅಧಿಕಾರದಿಂದ ಕೆಳಕ್ಕಿಳಿಸಬೇಕು ಮತ್ತುಕಾಂಗ್ರೆಸ್ ಪಕ್ಷವನ್ನುಅಧಿಕಾರಕ್ಕೆತರಬೇಕುಎಂದು ಈ ಹಿಂದೆಕಾಂಗ್ರೆಸ್ ಮುಖಂಡರಾದ ಮಣಿಶಂಕರ್‍ಅಯ್ಯರ್‍ಅವರೂ ಪಾಕಿಸ್ತಾನದಲ್ಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. 2014ರಲ್ಲಿ ಅಯ್ಯರ್‍ಅವರು ಈ ಸಂದರ್ಶನಕೊಟ್ಟಾಗ ಈ ಹೇಳಿಕೆ ಕೇಳಿ ಟಿ.ವಿ. ಆಂಕರ್‍ಆತಂಕಗೊಂಡಿದ್ದರು. ಇದರಲ್ಲಿ ನಮ್ಮ ಪಾತ್ರಏನಿದೆ ಎಂಬ ಪ್ರಶ್ನೆಯನ್ನೂಅವರು ಮುಂದಿಟ್ಟಿದ್ದರು.ಇದು ಕಾಂಗ್ರೆಸ್ಸಿಗರ ಷಡ್ಯಂತ್ರವಲ್ಲದೆ ಮತ್ತೇನು?ಪಾಕಿಸ್ತಾನ ಪರಕಾಂಗ್ರೆಸ್ ಇರುವುದಕ್ಕೆಇದಕ್ಕಿಂತದೊಡ್ಡ ಸಾಕ್ಷಿ ಬೇಕೇ ಎಂದುಅವರು ಪ್ರಶ್ನಿಸಿದ್ದಾರೆ.ಇದೇ ಮಣಿಶಂಕರ್‍ಅಯ್ಯರ್‍ಅವರು ಈ ಹಿಂದೆಜಮ್ಮು ಕಾಶ್ಮೀರವನ್ನು ಅಫಘಾನಿಸ್ತಾನಕ್ಕೆ ಹೋಲಿಸಿದ್ದರು ಎಂಬುದೂಗಮನಾರ್ಹಎಂದಿದ್ದಾರೆ.
ರಾಹುಲ್‍ಗಾಂಧಿಅವರೂ 370ನೇ ವಿಧಿ ರದ್ದತಿ ಬಹುದೊಡ್ಡ ಪ್ರಮಾದಎಂದುಟ್ವೀಟ್ ಮಾಡಿದ್ದರು. 2019ರ ಆಗಸ್ಟ್‍ನಲ್ಲಿ ಈ ಟ್ವೀಟ್ ಮಾಡಲಾಗಿತ್ತು.ಜಮ್ಮು ಕಾಶ್ಮೀರದಲ್ಲಿ ಸಾವಿರಾರುಜನರ ಹತ್ಯೆಆಗಿದೆ, ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವೇಇಲ್ಲಎಂದಿದ್ದರು.ಇದಾದಎರಡು ದಿನಗಳ ಬಳಿಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್‍ಖಾನ್‍ಅವರು ಈ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು, ಜಮ್ಮು ಕಾಶ್ಮೀರದ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ರಾಹುಲ್‍ಗಾಂಧಿಅವರಟ್ವೀಟ್‍ಅನ್ನೂಅವರು ಉಲ್ಲೇಖಿಸಿದ್ದರು. ಇದು ಪಾಕಿಸ್ತಾನ ಮತ್ತುಕಾಂಗ್ರೆಸ್ ನಡುವಿನ ಗುಪ್ತ ಒಪ್ಪಂದಕ್ಕೆ ಸಾಕ್ಷಿಅಲ್ಲವೇಎಂದುಶ್ರೀ ಮುರುಳಿಅವರು ಪ್ರಶ್ನಿಸಿದ್ದು, ಈ ಕುರಿತಂತೆಕಾಂಗ್ರೆಸ್ ಮುಖಂಡರು ಸ್ಪಷ್ಟನೆಕೊಡಲಿ ಎಂದು ಒತ್ತಾಯಿಸಿದ್ದಾರೆ.
ರಾಹುಲ್‍ಗಾಂಧಿಅವರುಕೋವಿಡ್ ಹೆಚ್ಚಳದ ಕುರಿತು 2020ರ ಫೆಬ್ರವರಿ 13ರಂದು ಟ್ವೀಟ್‍ನಲ್ಲಿಜಮ್ಮು -ಕಾಶ್ಮೀರವನ್ನು ಪಾಕಿಸ್ತಾನದ ಭಾಗಎಂದು ಭೂಪಟದಲ್ಲಿ ತೋರಿಸಿದ್ದರು. ಇದು ಕಾಂಗ್ರೆಸಿಗರ ದೇಶವಿರೋಧಿಚಿಂತನೆಯ ಭಾಗವಲ್ಲವೇಎಂದುಅವರು ಕೇಳಿದ್ದಾರೆ.
ಪುಲ್ವಾಮಾ ದಾಳಿಯನ್ನು “ನರೇಂದ್ರ ಮೋದಿ- ಇಮ್ರಾನ್‍ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್” ಎಂದುಕಾಂಗ್ರೆಸ್ ನೇತಾರ- ನಮ್ಮರಾಜ್ಯದವರೇಆದ ಬಿ.ಕೆ.ಹರಿಪ್ರಸಾದ್‍ಅವರು ಹೇಳಿದ್ದರು. ಇದು ನಮ್ಮದೇಶದ ಸೇನೆಯಧೈರ್ಯಸ್ಥೈರ್ಯವನ್ನು ಕುಂದಿಸುವ ಕಾಂಗ್ರೆಸ್ಸಿಗರ ದೇಶವಿರೋಧಿ ಮನಸ್ಥಿತಿಗೆ ಹಿಡಿದಕೈಗನ್ನಡಿಅಲ್ಲವೇ ಎಂದೂಅವರು ಪ್ರಶ್ನಿಸಿದ್ದಾರೆ. ಸುದ್ದಿಗಾಗಿ, ಜಾಹೀರಾತಿಗಾಗಿ ,👉 ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

Leave a Reply

Your email address will not be published.