ಕೋವಿಡ್ -19ರ ರೋಗದ ವಿರುದ್ಧ ಜನಜಾಗೃತಿ ಬಿ ಜೆ ಪಿ ಶಾಸಕ  ಜಿ ಹೆಚ್ ತಿಪ್ಪಾರೆಡ್ಡಿ ರವರಿಂದ ಚಾಲನೆ

ನಿತ್ಯವಾಣಿ,ಚಿತ್ರದುರ್ಗ, (ಮೇ.30) : ಚಿತ್ರದುರ್ಗ ನಗರದಲ್ಲಿ ಇಂದು ಭಾರತೀಯ ಜನತಾ ಪಾರ್ಟಿ ವತಿಯಿಂದ  ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿನ ಕೇಂದ್ರ ಸರ್ಕಾರ 7 ವರ್ಷಗಳ ಆಡಳಿತ ಪೂರ್ಣಗೊಳಿಸುತ್ತಿರುವ   ಇನ್ನೆಲೆಯಲ್ಲಿ  ಸರ್ಕಾರದ ಮಾರ್ಗಸೂಚಿಯಂತೆ   ಬೆಳಗ್ಗೆ  ಶಾಸಕರಾದ
ಜಿ ಹೆಚ್ ತಿಪ್ಪಾರೆಡ್ಡಿ ರವರ ನೇತೃತ್ವದಲ್ಲಿ     ಬಾಲಭವನ  ಮತ್ತು  ಐ.ಯು.ಡಿ.ಪಿ ಬಡಾವಣೆ,  ಹಾಗೂ ಗಾಂಧಿ ನಗರ,  ಮಠದ ಕುರುಬರಹಟ್ಟಿಯಲ್ಲಿ
ಕೋವಿಡ್ -19ರ ರೋಗದ ವಿರುದ್ಧ ಜನಜಾಗೃತಿ ಮೂಡಿಸಿ ಕೋವಿಡ್-19 ಲಸಿಕೆ   ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು,
ಈ  ಸಮಯದಲ್ಲಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಭಾನುಮೂರ್ತಿ  ಲಸಿಕೆ ಹಾಕಿಸಿ ಕೊಂಡರು. ಈ ಸಂದರ್ಭದಲ್ಲಿ  ಜಿಲ್ಲಾ ಆರೋಗ್ಯನೂಡಲ್ ಅಧಿಕಾರಿ ಕುಮಾರ್ ಸ್ವಾಮಿ,  ಜಿಲ್ಲಾ ಅಧ್ಯಕ್ಷರಾದ ಮುರುಳಿ ಎ  ಮತ್ತು ಜಿಲ್ಲಾ ಉಪಾಧ್ಯಷ ಸಂಪತ್ ಕುಮಾರ್ ಜಿ ಎಸ್,  ನಗರ ಸಭೆ ಸದಸ್ಯ ಶ್ರೀನಿವಾಸ್ ,  ಮಾದ್ಯಮ ವಕ್ತಾರ ನಾಗರಾಜ ಬೇಂದ್ರೆ, ಮುಖಂಡ ಶಿವಣಚಾರ್, ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷ ಶಶಿಧರ್ ಜೆ,   ಕಾರ್ಯದರ್ಶಿ ಪ್ರದೀಪ್. ಪ್ರಸನ್ನ, ಉಪಾಧ್ಯಷ ಕಾರ್ತೀಕ್, ಒಬಿಸಿ ನಗರ ಅಧ್ಯಕ್ಷ ಕೃಷ್ನ ಎನ್, ನಗರ ಯುವಮೋರ್ಚಅಧ್ಯಕ್ಷ ರಾಮ್ ,  ಬಿಜೆಪಿಯ ಜಿಲ್ಲಾ ಪದಾಧಿಕಾರಿಗಳು , ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು  ಹಾಜರಿದ್ದರು

Leave a Reply

Your email address will not be published.