ನಿತ್ಯವಾಣಿ,ಚಿತ್ರದುರ್ಗ: ನಗರದ ಕನಕ ವೃತ್ತದಲ್ಲಿನ ಶರತ್ ವೈನ್ಸ್ ಸ್ಟೋರ್ ಕ್ಯಾಷ್ ನಲ್ಲಿದ್ದ ಮಹಿಳೆಯ
ಕಣ್ಣಿಗೆ ವ್ಯಕ್ತಿಯೋರ್ವ ಕಾರದಪುಡಿ ಎರಚಿ, ಚಾಕುವಿನಿಂದ ಇರಿದು ಕ್ಯಾಷ್ ಕೌಂಟರ್ ನಲ್ಲಿದ್ದ ಸುಮಾರು 1 ಲಕ್ಷ ರೂ.ಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಿನ್ನೆ ರಾತ್ರಿ 10.30 ಸುಮಾರಿನಲ್ಲಿ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಕೋಟೆ ಪೊಲೀಸ್ ಠಾಣೆ ಸಿಪಿಐ ರಮೇಶ್ ರಾವ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ