ನಿತ್ಯವಾಣಿ, ಚಳ್ಳಕೆರೆ, (ನ.11) : ಚಳ್ಳಕೆರೆ ತಾಲ್ಲೂಕು ಟಿ ಎನ್ ಕೋಟೆ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ನಲ್ಲಿ ವಾಣಿಜ್ಯ ವಿಭಾಗ ಪ್ರಾರಂಭ ವಾಗಿ ಮೂರು ತಿಂಗಳು ಕಳೆದರೂ ಇಲಾಖೆ ಯವರು ಅಥಿತಿ ಉಪನ್ಯಾಸಕರ ನ್ನು ನೇಮಕ ಮಾಡದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವನ್ನು ಆಡುತ್ತಿದ್ದರೆ. ಇದೇ ತಿಂಗಳು ಮಧ್ಯ ವಾರ್ಷಿಕ ಪರೀಕ್ಷೆ ಪ್ರಾರಂಭ ಆಗುತ್ತದೆ ಅವರಿಗೆ ಪಾಠಗಳು ಆಗದೆ ವಿದ್ಯಾರ್ಥಿಗಳು ದಿಕ್ಕು ಕಾಣದೆ ನಮ್ಮ ನಿತ್ಯವಾಣಿ ಗೆ ಕರೆ ಮಾಡಿ ಅಳನ್ನು ತೋಡಿ ಕೊಂಡಿದ್ದಾರೆ, ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅದಷ್ಟು ಬೇಗನೆ ಉಪನ್ಯಾಸಕರ ನೇಮಿಸಿ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ವನ್ನು ಉಜ್ವಲ ಗೊಳಿಸಲು ತಾವು ಸಹಕರಿಸಿ ಬೇಕು, ಇಲ್ಲವಾದಲ್ಲಿ ವಿದ್ಯಾರ್ಥಿಗಳ ಕೋಪಕ್ಕೆ ಗುರಿಯಾಗುತ್ತಿರಿ ಎಂದು ನಮ್ಮ ನಿತ್ಯವಾಣಿ ಪತ್ರಿಕೆ ಎಚ್ಚರಿಸಿದೆ