ವೈದ್ಯರ ಮೇಲೆ ನಿರಂತರ ಹಲ್ಲೆ ಖಂಡಿಸಿ ಪ್ರತಿಭಟನೆ ; ಪ್ರಧಾನ ಮಂತ್ರಿಗಳ ಮಧ್ಯಸ್ಥಿಕೆ ಒತ್ತಾಯ

ನಿತ್ಯವಾಣಿ, ಚಿತ್ರದುರ್ಗ(ಜೂ. 18) : ವೈದ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಖಂಡಿಸಿ ಶುಕ್ರವಾರ ಐಎಂಎ ವೈದ್ಯರಿಂದ ಕೈಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಎಲ್ಲಾ ವೈದ್ಯರು ಸಹ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಕೊವೀಡ್ ವಿರುದ್ದ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಾ ಬಂಧಿರುವುದು ಖಂಡನೀಯ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ನಿರತ ವೈದ್ಯರು ಒತ್ತಾಯಿಸಿ ಐಎಂಎ, ಮೊದಲ ದಿನದಿಂದಲೇ, ರಾಷ್ಟ್ರದಲ್ಲಿ ಲಸಿಕೆ ಅಭಿಯಾನವನ್ನು ಪೆÇ್ರೀತ್ಸಾಹಿಸಲು, ಅನುಮೋದಿಸಲು ಮತ್ತು ಹೆಚ್ಚಿಸಲು ಸರ್ಕಾರದೊಂದಿಗೆ ಸಹಕಾರ ನೀಡುವಲ್ಲಿ ಮುಂಚೂಣಿಯಲ್ಲಿ ನಿಂತಿದೆ. ನಿಮ್ಮ ಪೋಷಣೆಯಿಂದ, ಸಾಮಾನ್ಯ ಜನರ ಮನಸ್ಸಿನಲ್ಲಿ ಲಸಿಕೆ ಹಿಂಜರಿಕೆ ಗಣನೀಯವಾಗಿ ಕಡಿಮೆಯಾಗಿದೆ ಎಂದಿದ್ದಾರೆ.

ನಾವುಗಳು ನಮ್ಮ ಸೇವೆಯನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿಯೇ ಮಾಡುತ್ತೇವೆ. ನಮ್ಮ ಕೈಮೀರಿ ರೋಗಿಗಳ ಪ್ರಾಣಕ್ಕೆ ಅಪಾಯ ಉಂಟಾದರೆ ಅದಕ್ಕೆ ನಮ್ಮನ್ನು ಹೊಣೆ ಮಾಡುವ ರೋಗಿಗಳ ಸಂಬಂಧಿಕರು ನಮ್ಮ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿವೈದ್ಯರಿಗೆ ರಕ್ಷಣೆ ಕೊಡುವ ಜತೆಗೆ ಕರೋನಾದಿಂದ ಸಾವನ್ನಪ್ಪಿದ ವೈದ್ಯರನ್ನು ಕೊರೋನಾ ಹುತಾತ್ಮರು ಎಂದು ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈಗ ಸಧ್ಯ ದೇಶದಲ್ಲಿ ವ್ಯಾಪಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ, ಇಡೀ ವೈದ್ಯಕೀಯ ಭ್ರಾತೃತ್ವವು ಮೊದಲ ದಿನದಿಂದಲೇ ಕೊರೊನಾ ವೈರಸ್ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿ ಹೋರಾಡುತ್ತಿದೆ ಮತ್ತು ತೀವ್ರ ಕೋವಿಡ್-19 ಸೋಂಕಿನ ಹಿಡಿತದಿಂದ ಲಕ್ಷಾಂತರ ಜನರನ್ನು ರಕ್ಷಿಸಲು ಸಾಧ್ಯವಾಗಿಸಿದೆ. ತತ್ಪರಿಣಾಮವಾಗಿ ಕೋವಿಡ್-19 ವಿರುದ್ಧದ ಈ ಯುದ್ಧದಲ್ಲಿ ತನ್ನ 1400 ಕ್ಕೂ ಹೆಚ್ಚು ಸಕ್ರಿಯ ಅನುಭವಿ ವೈದ್ಯರನ್ನು ಹಾಗೂ ಕ್ರಿಯಾತ್ಮಕ ಕಿರಿಯ ವೈದ್ಯರು ಹುತಾತ್ಮರಾಗಿದ್ದಾರೆ.

ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳು (ಹಿಂಸೆ ಮತ್ತು ಆಸ್ತಿಗೆ ಹಾನಿ ನಿಷೇಧ) ಮಸೂದೆ, ಕರ್ತವ್ಯನಿರತ ವೈದ್ಯರು ಮತ್ತು ಇತರ ಆರೋಗ್ಯ ಆರೈಕೆ ವೃತ್ತಿಪರರ ಮೇಲೆ ಹಲ್ಲೆ ಮಾಡುವ ಜನರನ್ನು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಮೂಲಕ ಶಿಕ್ಷಿಸಲು ಪ್ರಯತ್ನಿಸುವ 2019 – ಕರಡು ಕಾನೂನಿನ ಬಗ್ಗೆ ಅಂತರ ಸಚಿವಾಲಯದ ಸಮಾಲೋಚನೆಯ ಸಮಯದಲ್ಲಿ ಗೃಹ ಸಚಿವಾಲಯವು ಇದನ್ನು ವಜಾಗೊಳಿಸಿದೆ, ಐಪಿಸಿ / ಸಿಆರ್ ಪಿಸಿಯಿಂದ ನಿಬಂಧನೆಗಳನ್ನು ಸೇರಿಸುವ ಜೊತೆಗೆ ಮತ್ತು ವಿಚಾರಣೆಗಳ ತ್ವರಿತ ಮುಕ್ತಾಯಕ್ಕಾಗಿ ನಿಗದಿತ ಸಮಯದ ವೇಳಾಪಟ್ಟಿಗೆ ಷರತ್ತುಗಳನ್ನು ತಕ್ಷಣವೇ ಘೋಷಿಸಬೇಕು. ಅಂತಹ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶಿಕ್ಷಿಸಬೇಕು, ಇದರಿಂದ ಯಾವುದೇ ಆರೋಗ್ಯರಕ್ಷಣಾ ವೃತ್ತಿಪರರ ಮೇಲೆ ದಾಳಿ ಮಾಡುವ ಸಮಾಜವಿರೋಧಿ ಶಕ್ತಿಗಳಿಗೆ ಪರಿಣಾಮಕಾರಿ ಪ್ರತಿಬಂಧಕವನ್ನು ಸೃಷ್ಟಿಸಬೇಕು ಎಂದು ಒತ್ತಾಯಿಸಲಾಯಿತು.

ಲಸಿಕೆಯ ಮೂಲಕ ನಾವು ನಮ್ಮ ಜನರು ಮತ್ತು ದೇಶವನ್ನು ಈ ತೀವ್ರ ಸೋಂಕಿನ ದುರಂತ ಕ್ರಿಯೆಗಳಿಂದ ರಕ್ಷಿಸಬಹುದು ಎಂಬುದು ಚೆನ್ನಾಗಿ ಸಾಬೀತಾಗಿದೆ. ವಿಶ್ವಾದ್ಯಂತವೂ ಸಹ, ಕೊರೊನಾ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಲು ಮತ್ತು ಸಾಧ್ಯವಾದಷ್ಟು ಗರಿಷ್ಠ ಪ್ರಮಾಣದಲ್ಲಿ ಜೀವಹಾನಿಯನ್ನು ತಡೆಗಟ್ಟಲು ಲಸಿಕೆಯು ಅತ್ಯಂತ ಪರಿಣಾಮಕಾರಿ ಪರಿಹಾರವೆಂದು ಕಂಡುಬಂದಿದೆ. ಆದ್ದರಿಂದ, ಸರ್ಕಾರವು ಲಸಿಕೆಗಳನ್ನು ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ 50% ವರೆಗೆ ಬಿಡದೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಸಾರ್ವತ್ರಿಕ ಉಚಿತ ಲಸಿಕೆಯನ್ನು ಉತ್ತೇಜಿಸಬೇಕು. ನಿಮ್ಮಂತಹ ಪ್ರಬಲ ನಾಯಕ ಈ ಕಾರ್ಯಕ್ರಮವನ್ನು ಮುನ್ನಡೆಸಿದಾಗ ಮಾತ್ರ ಸಂಪೂರ್ಣ ಪ್ರಯೋಜನವು ಎಲ್ಲಾ ಜನರಿಗೆ ತಲುಪುತ್ತದೆ ಎಂದು ನಾವು ನಂಬುತ್ತೇವೆ. ಲಸಿಕೆಯ ವಿರುದ್ಧ ಮಾತನಾಡುವ ಜನರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ದೀರ್ಘಕಾಲದಿಂದ ಬಾಕಿ ಇರುವ ಮನವಿಗಳನ್ನು ಪರಿಹರಿಸಲು ಮತ್ತು ಆಧುನಿಕ ವೈದ್ಯಕೀಯ ವೃತ್ತಿಪರರು ಮಾನಸಿಕ ಮತ್ತು ದೈಹಿಕ ಭಯವಿಲ್ಲದೆ ಸಹಾನುಭೂತಿ ಮತ್ತು ಸಮರ್ಪಣೆಯಿಂದ ಕೆಲಸ ಮಾಡಲು ಸೂಕ್ತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿಗಳ ವೈಯಕ್ತಿಕ ಹಸ್ತಕ್ಷೇಪಕ್ಕೆ ಅಗತ್ಯ ಎಂದಿದ್ದಾರೆ.

ಚಿತ್ರದುರ್ಗ ಜಿಲ್ಲಾ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಡಾ. ಸಾಲಿ ಮಂಜಪ್ಪ ನೇತೃತ್ವದಲ್ಲಿ ವೈದ್ಯರು ತಮ್ಮ ಬೇಡಿಕೆಯಾದ ವೈದ್ಯರ ಮೇಲೆ ರಾಜ್ಯದಲ್ಲಿ ಪದೇಪದೇ ಹಲ್ಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದನ್ನು ಖಂಡಿಸಿ “ರಕ್ಷಕರನ್ನು ರಕ್ಷಿಸಿ” ಎಂಬ ಉದ್ಘೋಷದೊಂದಿಗೆ ವೈದ್ಯರು ಕಪ್ಪುಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಕವಿತ ಎಸ್ ಮನ್ನಿಕೇರಿ ರವರಿಗೆ ಬೇಡಿಕೆಯ ಮನವಿ ಸಲ್ಲಿಸಿದ್ದಾರೆ.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

 

Leave a Reply

Your email address will not be published.