ನಿತ್ಯವಾಣಿ, ಚಿತ್ರದುರ್ಗ, ಡಿ.07 : ಕೋಟೆ ನಾಡಿನಲ್ಲಿ ಕನ್ನಡ ಹಬ್ಬವನ್ನು ಇದೇ ಡಿಸೆಂಬರ್ 8ರಿಂದ 11 ವರಿಗೆ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ ಶಿವಕುಮಾರ್ ರವರು ತಿಳಿಸಿದರು.
ನಗರದ ಪತ್ರಿಕ ಭವನದಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು ಕರುನಾಡ ವಿಜಯ ಸೇನೆ ಜಿಲ್ಲಾ ಘಟಕದಿಂದ ನಗರದ ಬಿಡಿ ರಸ್ತೆಗಳಲ್ಲಿ ಕನ್ನಡ ಭುವನೇಶ್ವರಿ ದೇವಿಯ ಸ್ತಬ್ಧ ಚಿತ್ರ ಹಾಗೂ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಗುವುದು ಎಂದು ಹೇಳಿದರು.
ಸಾಹಿತಿಯಾದ ವೀರಭದ್ರಪ್ಪನವರಿಗೆ ರಾಜ ವೀರ ಮದಕರಿ ನಾಯಕ ರಾಜ್ಯ ಪ್ರಶಸ್ತಿ ಹಾಗೂ ಹಾಸನ ಜಿಲ್ಲೆಯ ವೈದ್ಯೆ ಡಾ.ನಿಸಾರ್ ಫಾತಿಮಾ ರವರಿಗೆ ವೀರ ಒನಕೆ ಓಬವ್ವ ರಾಜ್ಯ ಪ್ರಶಸ್ತಿ ನೀಡುಲಾಗುವುದು ತಿಳಿಸಿದರು.