ನಿತ್ಯವಾಣಿ , ಬೆಂಗಳೂರು, ( ಮೇ.29) : ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಜೂನ್ 30ರವರೆಗೆ ವಿಸ್ತರಿಸಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ.ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆ ಆಗುವ ಸೂಚನೆ ಇದ್ದರೂ ನಿಯಂಯ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಿಸಲು ತೀರ್ಮಾನಿಸಿದೆ.ಪ್ರಸ್ತುತ ಈಗ ರಾಜ್ಯದಲ್ಲಿ ಜೂನ್ 9 ರವೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಇದೇ ನಿಯಮ ಮುಂದುವರಿಯಲಿದೆ ಎಂದು ಸರಕಾರ ತಿಳಿಸಿದೆ.