ನದಿ ಶುದ್ಧೀಕರಣಕ್ಕೆ ಭೂಮಿಪೂಜೆ : ಅರ್ಕಾವತಿ ನದಿ ಪುನಶ್ಚೇತನ ಟ್ರಸ್ಟ್‌ನಿಂದ ಕಾಮಗಾರಿ

ರಾಮನಗರ: ಅರ್ಕಾವತಿ ನದಿ ಪುನಶ್ಚೇತನ ಟ್ರಸ್ಟ್ ವತಿಯಿಂದ ಕೈಗೊಂಡಿರುವ ನದಿ ಶುದ್ಧೀಕರಣ ಕಾರ್ಯಕ್ಕೆ ಟ್ರಸ್ಟ್‌ನ ಪದಾಧಿಕಾರಿಗಳು ಅರ್ಕೇಶ್ವರ ದೇವಾಲಯದ ಬಳಿ ಸೋಮವಾರ ಬೆಳಗ್ಗೆ ಸಾಂಕೇತಿಕವಾಗಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ. ವರದರಾಜಗೌಡ, ನಗರಾಭಿವೃದ್ಧಿ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನದಿ ಪಾತ್ರದ 1 ಕಾರ್ಯ ನಡೆಸಲಾಗುತ್ತದೆ. ನದಿಯಲ್ಲಿರುವ ಹಲವು ಸಮಸ್ಯೆಗೆ ಮುಕ್ತಿ ನೀಡಿ ಮೂಲ ಸ್ವರೂಪ ನೀಡುವ ಕೆಲಸ ಮಾಡಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ 4 ಕಿ.ಮೀ. ಶುದ್ಧೀಕರಣ ಜತೆಗೆ ಜಿಲ್ಲಾಡಳಿತದ ಸಹಕಾರದಲ್ಲಿ ಮಂಚನಬೆಲೆಯಿಂದ ಸಂಗಮದವರಗೆ ಹರಿಯುವ ಅರ್ಕಾವತಿ ನದಿಯನ್ನು ಅಭಿವೃದ್ದಿ ಪಡಿಸಲು ಜಿಪಂ ಕೆಡಿಪಿ ಸದಸ್ಯ ಎಂ.ರುದ್ರೇಶ್ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.

Leave a Reply

Your email address will not be published.