ದಿನಾಂಕ 04 .02 .2020 , ರಂದು ಸಂಜೆ ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿ ಚೌಳೂರು ಗ್ರಾಮದ ಬಸವೇಶ್ವರ ಕಾಲೋನಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಚಾಕು ಹಿಡಿದುಕೊಂಡು ಸಾರ್ವಜನಿಕರನ್ನು ಬೆದರಿಸುತ್ತಿರುವ ಬಗ್ಗೆ ಈಆರ್ ಎಸ್ಎಸ್ 112 ಗೆ ಕರೆ ಬಂದಿದ್ದು ತಕ್ಷಣವೇ ಹೊಯ್ಸಳ-9 ವಾಹನ ದಲ್ಲಿ ಗಸ್ತಿನಲ್ಲಿದ್ದ ಅಧಿಕಾರಿ ಶಿವಣ್ಣ ನಾಯಕ್ ಮತ್ತು ಚಾಲಕ ವೆಂಕಟೇಶ್ ರವರು ಕೂಡಲೇ ಸ್ಥಳಕ್ಕೆ ಧಾವಿಸಿ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು ಪರಶುರಾಂಪುರ ಠಾಣೆಗೆ ಹಸ್ತಾಂತರಿಸಿದ್ದಾರೆ…ಹೊಯ್ಸಳ 9 ಡಯಲ್- 112 ವಾಹನದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ. ಜಿ ಐಪಿಎಸ್ ರವರು ಶ್ಲಾಘಿಸಿದ್ದಾರೆ…..