ನಿತ್ಯವಾಣಿ, ಚಿತ್ರದುರ್ಗ,(ಡಿ.25) : ಚಿತ್ರದುರ್ಗದ ಪತ್ರಕರ್ತರ ಬಳಗ ಶನಿವಾರ ಬ್ರಹ್ಮಗಿರಿ ಬೆಟ್ಟ ಅಶೋಕ ಸಿದ್ದಾಪುರ,ಮೊಳಕಾಲ್ಮೂರು ತಾಲ್ಲೂಕು ಇಲ್ಲಿಗೆ ಬೇಟಿ ಕೊಟ್ಟಿತು,
ಬ್ರಹ್ಮಗಿರಿ ಶ್ರೀ ಸಿದ್ದೇಶ್ವರ ಸ್ವಾಮಿಚಿತ್ರದುರ್ಗ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಬಿ ಧನಂಜಯಪ್ಪ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು, ಶಬ್ದ ನಾದದ ಮಠ ಬ್ರಹ್ಮಗಿರಿ ಬೆಟ್ಟವು ನೋಡಲು ಬಹಳ ಸುಂದರವಾಗಿದ್ದು ಮತ್ತು ತುಂಬಾ ಎತ್ತರವಾಗಿರುತ್ತದೆ, ಶ್ರೀ ಸೋಮಣ್ಣ ಸ್ವಾಮೀಜಿಗಳು ಶ್ರೀ ಸ್ವಾಮಿಜಿಗಳವರ ಜೊತೆ ಪರ್ತಕರ್ತರ ಬಳಗ 200 ವರ್ಷ ಗಳ ಹಿಂದೆ ಸಿದ್ದೇಶ್ವರ ಸ್ವಾಮಿಗಳು ಸ್ಥಾಪಿಸಿದಂತ ಮಠವು ಇದೆ, ಬ್ರಹ್ಮಗಿರಿ ಕನ್ನಡ ದಿನ ಪತ್ರಿಕೆಯ ಸಂಪಾದಕರಾದ ಶ್ರೀ ಶ್ರೀನಿವಾಸ್ ರವರು ಮಾತನಾಡುತ್ತಿರುವುದುಮತ್ತು ಅವರ ಗದ್ದಿಗೆ ಯು ಕೂಡ ಇದೆ,ಇಲ್ಲಿನ ವಿಶೇಷ ಏನೆಂದರೆ ಮಠದ ಬಾಗಿಲುಗಳು ರಾತ್ರಿ ಸಮಯದಲ್ಲಿ ಮುಚ್ಚುವಾಗ ಸಿಂಹ ಘರ್ಜನೆ ಬೆಟ್ಟದ ಕೆಳಗಿನವರೆಗೂ ಶಬ್ದ ಬರುತ್ತದೆ, ಗೋವುಗಳು ಆಹಾರಕ್ಕಾಗಿ ಬ್ರಹ್ಮಗಿರಿ ಬೆಟ್ಟವನ್ನು ಏರಿ ಬಂದಿರುವುದು ಈ ಶಬ್ದಕ್ಕೆ ಕಾಡು ಪ್ರಾಣಿಗಳು ಇಲ್ಲಿಗೆ ಬರುವದಿಲ್ಲ ಎಂದು ಮತ್ತು ಮುಂಜಾನೆಬಾಗಿಲುಗಳು ತೆರೆಯುವಾಗ ಶಂಕನಾದ ಬರುತ್ತದೆ ಈ ನಾದಕ್ಕೆ ಕೆಳಗಡೆ ಇರುವ ಸುತ್ತಮುತ್ತಿನ ಹಳ್ಳಿಗಳ ವರೆಗೂ ಜನಗಳಿಗೆ ರೋಗರುಜಿನಗಳು ಬರುವುದಿಲ್ಲ ಎಂದು ಈಗಿರುವ ಸ್ವಾಮಿಗಳು ಸೋಮಣ್ಣ ಸ್ವಾಮಿ ಅವರುತಿಳಿಸಿರುತ್ತಾರೆ, ಇಲ್ಲಿ 8ನೇ ಶತಮಾನದ ಶ್ರೀ ತ್ರಿಶಂಕೇಶ್ವರ ದೇವಸ್ಥಾನವಿದೆ, ಬ್ರಹ್ಮಗಿರಿ ಬೆಟ್ಟವನ್ನು ಏರಿ ಇಳಿಯುತ್ತಿರುವ 75 ವರ್ಷದ ವೃದ್ದೆಮಕ್ಕಳ ಜೊತೆಯಲ್ಲಿ ದೂರದಿಂದ ಬಂದಂತ ಭಕರು ಬೆಟ್ಟವನ್ನು ಏರಿ ಇಳಿಯುತ್ತಿರುವ ದೃಶ್ಯನಿತ್ಯವಾಣಿ ಸಂಪಾದಕ ಎಸ್ ಟಿ ನವೀನ್ ಕುಮಾರ್ ಬೆಟ್ಟವನ್ನು ಎರುವಾಗ ವಿಶ್ರಾಂತಿ ಪಡೆದ ದೃಶ್ಯ ಈ ದೇವಸ್ಥಾನದಲ್ಲಿ ಶಾಸನ ಸಂಸ್ಕೃತದಲ್ಲಿ ಲಿಪಿಯಲ್ಲಿ ಬರೆದಿರುವ ಬಂಡೆಯಿದೆ, ಲಿಪಿಯ ಬಂಡೆ150ಕ್ಕೂ ಮೇಲ್ಪಟ್ಟು ಗೋವುಗಳು ಇರುವ ಶಾಲೆಯಿದೆ, ಗೋವುಗಳು ಬೆಟ್ಟದ ಕೆಳಗಿನಿಂದ ಆಹಾರಕ್ಕೆ ಮಠದತ್ತ ಹಿಂಡುಹಿಂಡಾಗಿ ಬರುತ್ತವೆ, ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದ ದರ್ಶನ ಮಾಡಲು ಭಕ್ತಾದಿಗಳು ಬಂದು ಉಳಿದುಕೊಂಡು ಹೋಗುತ್ತಾರೆ, ಗೋಶಾಲೆಯಲ್ಲಿ ಸ್ವಾಮಿಗಳ ಜೊತೆ ಮಾಲತೇಶ್ ಅರಸ್, ಎಸ್ ಟಿ ನವೀನ್ ಕುಮಾರ್, ವೀರೇಶ್ ಇಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತದೆ, ನಮ್ಮ ಪತ್ರಕರ್ತರು ಈ ದೃಶ್ಯಗಳನ್ನು ನೋಡಿ ಕಣ್ತುಂಬಿಕೊಂಡು ಸ್ವರ್ಗದಲ್ಲಿ ಇದ್ದೇವೆ ಎಂಬ ಅನುಭವ ಆಗಿ ಆನಂದ ಪಟ್ಟೆವು, ಶ್ರೀ ಸೋಮಣ್ಣ ಸ್ವಾಮೀಜಿ ಗೋಶಾಲೆಯಲ್ಲಿ ಕರುಗಳ ಜೊತೆಕರುಗಳು ಒಗ್ಗಟ್ಟಾಗಿ ನಮ್ಮ ಕ್ಯಾಮೆರವನ್ನು ನೋಡುತ್ತಿರುವ ದೃಶ್ಯ ಇದೇ ಸಮಯದಲ್ಲಿ ಬ್ರಹ್ಮಗಿರಿ ಎಂದು ಹೆಸರಿಟ್ಟಿರುವ ಬ್ರಹ್ಮಗಿರಿ ಕನ್ನಡ ದಿನಪತ್ರಿಕೆಯ 41ನೇ ವಾರ್ಷಿಕ ಮಹೋತ್ಸವವನ್ನು ಸಂಪಾದಕರಾದ ಶ್ರೀನಿವಾಸ್ ರವರು ಆಚರಣೆ ಮಾಡಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದರು ಗಳಿಂದ ಜಾನಪದ ಹಾಡುಗಳ ಕಾರ್ಯಕ್ರಮ ಏರ್ಪಾಟು ಮಾಡಿದ್ದರು, ಜಾನಪದ ತಂಡಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ತಾಣ ಎಲ್ಲರೂ ಬಂದು ಆನಂದವನ್ನು ಪಡೆಯಿರಿ, ಗೋವುಗಳ ಸಂರಕ್ಷಣೆಗೆ ಹಾಗೂ ನಿತ್ಯ ಪ್ರಸಾದ ವಿನಿಯೋಗಕ್ಕೆ ಈ ಮಠಕ್ಕೆ ಆರ್ಥಿಕವಾಗಿ ಸಹಾಯವನ್ನು ಮಾಡಿ ಎಂದು ನಮ್ಮ ನಿತ್ಯ ವಾಣಿ ದಿನಪತ್ರಿಕೆ ಮನವಿ ಮಾಡಿದೆ,