🙏ನಿತ್ಯವಾಣಿ ಶ್ರಾವಣ ಶನಿವಾರದ ರಾಶಿ ಭವಿಷ್ಯ 🙏
ಮೇಷ
ಶನಿವಾರ, 14 ಆಗಸ್ಟ್
ಶಾಂತ ಮನಸ್ಥಿತಿ ಮತ್ತು ಕುಟುಂಬ ವಿಚಾರಗಳಲ್ಲಿ ಸಂತೋಷವನ್ನು ಇಂದು ಹೆಚ್ಚಿನ ಶ್ರಮಪಡುವಂತೆ ಗ್ರಹಗತಿಗಳು ನಿಮ್ಮನ್ನು ಪ್ರಚೋದಿಸುತ್ತವೆ,ಮತ್ತು ಇದು ಕಳೆದುಹೋದ ಆಸ್ತಿಗಳನ್ನು ಮರುಪಡೆಯುವತ್ತ ಹಾದಿಮಾಡಿಕೊಡುತ್ತದೆ. ಇಂದು ನೀವು ಸ್ವಾದಿಷ್ಟ ಭೋಜನದಲ್ಲಿ ತೊಡಗಿಸಿಕೊಳ್ಳುತ್ತೀರಿ ಮತ್ತು ಖುಷಿಯ ಮನಸ್ಥಿತಿಯೊಂದಿಗೆ ಆನಂದಿಸುವಿರಿ. ವಿದೇಶಿ ವ್ಯಾಪಾರದಲ್ಲಿ ತೊಡಗಿರುವವರಿಗೆ ಇಂದು ಅದೃಷ್ಟದಾಯಕ ದಿನ. ಆದರೂ, ನಿಮ್ಮ ಕೋಪದ ಬಗ್ಗೆ ನಿಯಂತ್ರಣವಿರಿಸುವಂತೆ ಮತ್ತು ಅನಗತ್ಯ ಆಧ್ಯಾತ್ಮ ಚರ್ಚೆಯಲ್ಲಿ ತೊಡಗದಂತೆ ಮತ್ತು ಸಮಚಿತ್ತತೆಯನ್ನು ಕಾಯ್ದುಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ವೃಷಭ
ಶನಿವಾರ, 14 ಆಗಸ್ಟ್
ನಿಮ್ಮ ತಾಯಿಯ ಕಡೆಯಿಂದ ಶುಭಸುದ್ದಿ ಬರುವ ನಿರೀಕ್ಷೆಯಿರುವುದರಿಂದ ದಿನಪೂರ್ತಿ ನೀವು ಸಂತೋಷವಾಗಿರುತ್ತೀರಿ. ನಿಮ್ಮ ಮನೆ ದೇವರ ಆಶೀರ್ವಾದದೊಂದಿಗೆ ಇಂದು ನೀವು ನಿಮ್ಮ ವೃತ್ತಿ ಅಥವಾ ಉದ್ಯೋಗದಲ್ಲಿ ವ್ಯವಸ್ಥಿತವಾಗಿ ಪ್ರಗತಿ ಸಾಧಿಸುತ್ತೀರಿ ಮತ್ತು ನೀವು ಯೋಜಿಸಿದಂತೆಯೇ ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಸಹೋದ್ಯೋಗಿಗಳು ಮತ್ತು ಜೊತೆಗಾರರಿಂದ ನೀವು ಸಹಕಾರವನ್ನು ಪಡೆಯುವಿರಿ ಮತ್ತು ಇದು ಫಲಪ್ರದವಾಗಿರುತ್ತದೆ. ಆರೋಗ್ಯಸಂಬಂಧಿ ವಿಚಾರಗಳು ನಿಮ್ಮನ್ನು ಚಿಂತೆಗೀಡುಮಾಡುವುದಿಲ್ಲ.
ಮಿಥುನ
ಶನಿವಾರ, 14 ಆಗಸ್ಟ್
ಗ್ರಹಗತಿಗಳು ಇಂದು ನಿಮ್ಮ ಹಾದಿಯಲ್ಲಿ ಯಾವುದೇ ವಿಶೇಷವನ್ನು ತರುವುದಿಲ್ಲ. ಖರ್ಚುವೆಚ್ಚಗಳು ಹೆಚ್ಚಾಗಲಿವೆ ಮತ್ತು ಎಲ್ಲವೂ ಸಾಮಾನ್ಯ ಮತ್ತು ನೀರಸವಾಗಿರುತ್ತದೆ. ಆದ್ದರಿಂದ ಹೊಸ ಯೋಜನೆಗಳನ್ನು ಪ್ರಾರಂಭಿಸದಂತೆ ನಿಮಗೆ ಸಲಹೆ, ಸಂಗಾತಿ ಅಥವಾ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮ್ಮ ಮನಸ್ಸನ್ನು ಕಾಡಬಹುದು ಮತ್ತು ನಿಮ್ಮನ್ನು ಅನ್ಯಮನಸ್ಕರಾಗಿರುವಂತೆ ಮಾಡಬಹುದು ಮತ್ತು ಇದು ಸಣ್ಣ ಮಟ್ಟದ ಉದರ ವ್ಯಾಧಿ ಮತ್ತು ಒತ್ತಡಕ್ಕೆ ಕಾರಣವಾಗಬಹುದು. ದೀರ್ಘಸಮಯದ ಸಂಘರ್ಷ ಮತ್ತು ಅವಮಾನವನ್ನು ತಪ್ಪಿಸಲು ಚರ್ಚೆ ಮತ್ತು ವಾಗ್ವಾದಗಳಿಂದ ದೂರವಿರಿ. ಉನ್ನತ ಶಿಕ್ಷಣದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಅಥವಾ ಜನರಿಗೆ ಇದು ಉತ್ತಮ ಸಮಯ.
ಕರ್ಕಾಟಕ
ಶನಿವಾರ, 14 ಆಗಸ್ಟ್
ಇಂದು ನೀವು ಅತ್ಯಂತ ಎಚ್ಚರಿಕೆಯಿಂದಿರಬೇಕು. ದೈಹಿಕವಾಗಿ ಕ್ರಿಯಾಶೀಲರಾಗಿರಲು ಮತ್ತು ಮಾನಸಿಕವಾಗಿ ಶಾಂತರಾಗಿರಲು ನಿಮಗೆ ಅಸಾಧ್ಯವಾಗಬಹುದು ಮತ್ತು ನಿರಂಕುಶ ಖರ್ಚುವೆಚ್ಚಗಳು ಇನ್ನಷ್ಟು ಹೆಚ್ಚಬಹುದು. ನಿಮಗೆ ಎದೆನೋವು, ನಿದ್ರಾಹೀನತೆ ಅಥವಾ ಇತರ ಸಣ್ಣ ವ್ಯಾಧಿಯ ಅನುಭವವಾಗಬಹುದು. ಮತ್ತು ಇದು ನಿಮ್ಮ ದಿನದ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಬಹುದು.ಕೌಟುಂಬಿಕ ಸಂಘರ್ಷಗಳು ಗೊಂದಲದಲ್ಲಿರಿಸಬಹುದು ಮತ್ತು ಇದು ನಿಮ್ಮನ್ನು ಬೇಸರದಲ್ಲಿರಿಸಬಹುದು. ಸಾಮಾಜಿಕ ಅವಮರ್ಯಾದೆ ಮತ್ತು ದೂಷಣೆಯನ್ನು ತಪ್ಪಿಸಲು ಹತೋಟಿಯನ್ನು ಕಾಯ್ದುಕೊಳ್ಳುವಂತೆ ಮತ್ತು ಧ್ಯಾನದಲ್ಲಿ ತೊಡಗುವಂತೆ ನಿಮಗೆ ಸಲಹೆ
ಸಿಂಹ
ಶನಿವಾರ, 14 ಆಗಸ್ಟ್
ನಿಮ್ಮ ಇಷ್ಟ ದೇವರ ದಯದಿಂದ ನೀವು ವಿಶ್ವದ ಉನ್ನತ ಮಟ್ಟದಲ್ಲಿ ಉತ್ಸಾಹದಲ್ಲಿರುವಂತೆ ಭಾಸಗೊಳ್ಳುತ್ತೀರಿ ಮತ್ತು ಪರಿಣಾಮವಾಗಿ, ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಮತ್ತು ಸ್ಪರ್ಧಿಗಳ ಎದುರಲ್ಲಿ ಅದ್ಭುತ ಯಶಸ್ಸು ಮತ್ತು ಗೆಲುವನ್ನು ಸಾಧಿಸುತ್ತೀರಿ. ಸ್ನೇಹಿತರು ಅಥವಾ ಒಡಹುಟ್ಟಿದವರೊಂದಿಗಿನ ಸಂಬಂಧವು ನಿಮಗೆ ಸಂತೋಷವನ್ನು ತರಲಿದೆ ಮತ್ತು ಸುಂದರ ಪ್ರದೇಶಗಳಿಗೆ ಸಣ್ಣ ಪ್ರವಾಸ ಅಥವಾ ವಿಹಾರವನ್ನು ನೀವು ಆಯೋಜಿಸಬಹುದು. ಆರೋಗ್ಯ ಮತ್ತು ಹಣಕಾಸು ವಿಚಾರಗಳು ಅನುಕೂಲಕರವಾಗಿರುತ್ತದೆ. ಇದು ಅದೃಷ್ಟದಾಯಕ ಸಮಯ ಮತ್ತು ಅದೃಷ್ಟಕಾರಕ ಗ್ರಹಗತಿಗಳು ಹೊಸ ಯೋಜನೆಗಳನ್ನು ಪ್ರಾರಂಭಿಸುವಂತೆ ನಿಮ್ಮನ್ನು ಒತ್ತಾಯಿಸುತ್ತದೆ.
ಕನ್ಯಾ
ಶನಿವಾರ, 14 ಆಗಸ್ಟ್
ಅದೃಷ್ಟದಾಯಕ ದಿನವು ನಿಮಗಾಗಿ ಕಾದಿದೆ ಮುನ್ಸೂಚನೆ ಇದೆ ಕೌಟುಂಬಿಕ ವಿಚಾರಗಳು ಸಂತೋಷಕರವಾಗಿರುತ್ತೆದ ಮತ್ತು ಹಣಕಾಸು ವಿಚಾರಗಳು ನಿಮ್ಮನ್ನು ಅಷ್ಟು ಚಿಂತೆಗೊಳಪಡಿಸುವುದಿಲ್ಲ. ಹಿತಕರ ವರ್ತನೆ ಮತ್ತು ಸ್ನೇಹಶೀಲ ನಡತೆಯು ನಿಮ್ಮ ಗಮನಸೆಳೆಯುವವರಲ್ಲಿ ಧನಾತ್ಮಕತೆಯನ್ನು ಸೃಷ್ಟಿ ಮಾಡಲು ಮತ್ತು ಉತ್ತಮ ರೀತಿಯ ಪ್ರಭಾವ ಬೀರಲು ನೆರವಾಗುತ್ತದೆ. ಋಣಾತ್ಮಕ ಆಲೋಚನೆಗಳಿಂದ ದೂರವಿರಿ ಮತ್ತು ಸಂಘರ್ಷವನ್ನು ತಪ್ಪಿಸಲು ಮಾತಿನಲ್ಲಿ ಮತ್ತು ಆಲೋಚನೆಗಳ ಚರ್ಚೆಯಲ್ಲಿ ಎಚ್ಚರದಿಂದಿರಿ. ನಿಮ್ಮ ಪ್ರೀತಿಪಾತ್ರರನ್ನು ಮತ್ತು ಸ್ನೇಹಿತರನ್ನು ಭೇಟಿಯಾಗಲಿರುವಿರಿ.
ತುಲಾ
ಶನಿವಾರ, 14 ಆಗಸ್ಟ್
ಇಂದು ನೀವು ಏನೇ ಮಾಡಿದರೂ ಅದರಲ್ಲಿ ಸರಳತೆ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸುವಿರಿ. ಇಂದು ನಿಮಗೆ ಹಣಕಾಸು ಮತ್ತು ವ್ಯವಹಾರ ವಿವೇಚನೆಯನ್ನು ದೇವರು ದಯಪಾಲಿಸುತ್ತಾರೆ, ಮತ್ತು ನೀವು ಕಾರ್ಯಗಳನ್ನು ಚತುರತೆಯಿಂದ ಪೂರ್ಣಗೊಳಿಸುವಿರಿ. ನೀವು ಬಲಿಷ್ಠರಾಗಿರುವಿರಿ ಮತ್ತು ನಿಮ್ಮ ಆಲೋಚನೆ ಮತ್ತು ಚಿಂತನೆಗಳಲ್ಲಿ ದೃಢವಾಗಿರುವಿರಿ. ದೈಹಿಕವಾಗಿ ಸಂತೋಷ ಹಾಗೂ ಬೌದ್ಧಿಕ ಮಟ್ಟವು ನಿಮ್ಮನ್ನು ಸಂತಸದಲ್ಲಿರುತ್ತದೆ ಎಂಬುದಾಗಿ ಗಣೇಶ ದೃಢಪಡಿಸುತ್ತಾರೆ. ಆಭರಣಗಳ ಖರೀದಿ, ಉತ್ತಮ ಉಡುಪು ಮುಂತಾದವಗಳಿಗೆ ನಿಮ್ಮ ಸಮಯ ಹಾಗೂ ಹಣವನ್ನು ವ್ಯಯಿಸುವಿರಿ ಮತ್ತು ಸಡಗರದಿಂದಿರುವಿರಿ.ಫಲಭರಿತ ಸೃಜನಶೀಲ ಆಸಕ್ತಿಯು ನಿಮ್ಮ ಕ್ರಿಯಾಶೀಲ ಯೋಜನೆಗಳಲ್ಲಿ ಅವಕಾಶ ಪಡೆದುಕೊಳ್ಳುತ್ತವೆ.
ವೃಶ್ಚಿಕ
ಶನಿವಾರ, 14 ಆಗಸ್ಟ್
ಇಂದು ನಿಮ್ಮ ಖರ್ಚುವೆಚ್ಚಗಳು ಅಧಿಕವಾಗಲಿವೆ. ಮನರಂಜನೆ ಮತ್ತು ವಿನೋದಕ್ಕಾಗಿ ನೀವು ಹೆಚ್ಚು ಖರ್ಚುಮಾಡಲಿದ್ದೀರಿ.ಮಲ್ಟಿಪ್ಲೆಕ್ಸ್ ಅಥವಾ ಸರ್ಕಸ್ ಮುಂತಾದವುಗಳಿಗೆ ಭೇಟಿ ನೀಡುವಿರಿ. ಏನೇ ಆದರೂ, ನಿಮ್ಮ ಕ್ಷೀಣ ಆರೋಗ್ಯವು ಇದನ್ನು ಹಾಳುಮಾಡುತ್ತದೆ. ಮಾನಸಿಕವಾಗಿ ಈದಿನಕ್ಕಿಂತ ಉತ್ತಮ ದಿನ ಬೇರೊಂದಿಲ್ಲ. ಇಂದು ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಆದ್ದರಿಂದ ಜಾಗರೂಕತೆಯಿಂದಿರಿ. ಚರ್ಚೆಯ ವೇಳೆಯೂ ನೀವು ಏನೋ ಹೇಳುವ ಸಾಧ್ಯತೆಯಿದೆ ಮತ್ತು ನಿಮಗೆ ತಿಳಿಯದೆಯೇ ಅದು ಹಗೆತನಕ್ಕೆ ಹಾದಿಮಾಡಿಕೊಡುತ್ತದೆ. ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬಹುದು. ನಿಮ್ಮ ತಾಳ್ಮೆಯು ಇಂದು ಉತ್ತಮವಾಗಿರುವುದಿಲ್ಲ, ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರದಿಂದಿರಿ.
ಧನು
ಶನಿವಾರ, 14 ಆಗಸ್ಟ್
ಈ ದಿನವು ಅತ್ಯಂತ ಗೊಂದಲದ ದಿನವಾಗಲಿದೆ. ಕಾರ್ಯಕ್ಷೇತ್ರ, ಮನೆ ಮತ್ತು ಸಮಾಜದಲ್ಲಿ ಯಶಸ್ಸನ್ನು ಸಾಧಿಸಿದರೂ, ಅದನ್ನು ಆಸ್ವಾಧಿಸಲು ನಿಮಗೆ ಸಮಯವಿರುವುದಿಲ್ಲ. ಉದಾಹರಣೆಗೆ ನೀವು ನಿಮ್ಮ ಸಂಗಾತಿಯೊಂದಿಗೆ ಅತ್ಯುತ್ತಮ ಸಮಯ ಕಳೆಯುವಿರಿ ಆದರೆ, ನಿಮಗೆ ಇನ್ನೂ ಹೆಚ್ಚು ಹೊತ್ತು ಅವರೊಂದಿಗೆ ಇರಬೇಕು ಅನ್ನಿಸುತ್ತದೆ. ನಿಮ್ಮ ನಿಮ್ಮ ಸ್ನೇಹಿತರೊಂದಿಗೆ ಅದ್ಭುತ ಸಮಯವನ್ನು ಹೊಂದಿದರೆ, ನಿಮ್ಮ ಜೀವನದ ವಿಶೇಷ ವ್ಯಕ್ತಿಯೊಂದಿಗಿನ ಸಾಂಗತ್ಯದ ಅವಕಾಶವನ್ನು ಕಳೆದುಕೊಳ್ಳುವಿರಿ. ನೀವು ಯಾವುದೇ ವಿಶೇಷ ವ್ಯಕ್ತಿಯ ಶೋಧನೆಯಲ್ಲಿದ್ದರೆ, ಅವನು/ಅವಳು ನಿಮಗೆ ದೊರಕಬಹುದು. ನಿಮ್ಮ ಮಗ ಮತ್ತು ಸಂಗಾತಿಯು ನೀವು ಹೆಮ್ಮೆಪಡುವಂತೆ ಮತ್ತು ಪ್ರೀತಿ ಹೊಂದುವಂತೆ ಮಾಡಬಹುದು. ನಿಮ್ಮ ಆದಾಯವು ವೃದ್ಧಿಯಾಗಲಿದೆ ಮತ್ತು ಇದರಿಂದಾಗಿ ಮಹಿಳೆಯರೊಂದಿಗಿನ ಸಂಬಂಧವೂ ವೃದ್ಧಿಸಲಿದೆ.
ಮಕರ
ಶನಿವಾರ, 14 ಆಗಸ್ಟ್
ಇಂದು ನಿಮ್ಮ ದಿನವು ಪೂರ್ತಿ ತೊಂದರೆಗಳಿಂದ ತುಂಬಿರುತ್ತದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ವ್ಯವಹಾರವು ಎಂದಿನಂತೆ ಉತ್ತಮವಾಗಿರುವುದಿಲ್ಲ. ನಿಮ್ಮ ಆರೋಗ್ಯವು ಸ್ವಲ್ಪ ಅಪಾಯಕಾರಿ ಸ್ಥಿತಿಯಲ್ಲಿರಬಹುದು. ನೀವು ಅಪಘಾತದ ಸಂಭಾವ್ಯತೆಯನ್ನು ಹೊಂದಿದ್ದೀರಿ. ಅಪಾಯಕಾರಿ ಅನ್ನಿಸುವಂತಹ ವಿಚಾರಗಳಲ್ಲಿ ಮತ್ತು ಪರಿಸ್ಥಿತಿಗಳಲ್ಲಿ ವ್ಯವಹರಿಸುವಾಗ ಎಚ್ಚರದಿಂದಿರಿ. ಆದರೂ ಈ ದಿನವು ಕೆಲವು ಧನಾತ್ಮಕ ಅಂಶಗಳನ್ನು ಹೊಂದಿದೆ. ವ್ಯವಹಾರ ಸಂಬಂಧಿತ ಪ್ರಯಾಣವು ನಿಮಗೆ ದೀರ್ಘಾವಧಿಯವರೆಗೆ ಲಾಭವನ್ನು ತರಬಹುದು. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಸಂತೋಷ ಹೊಂದಿರುತ್ತಾರೆ. ನಿಮ್ಮ ಮಕ್ಕಳ ಅಭಿವೃದ್ಧಿಯ ಬಗ್ಗೆ ನೀವು ಹರ್ಷಪಡಬಹುದು ಇದು ನಿಮ್ಮ ಸ್ಥಾನಮಾನವನ್ನೂ ವೃದ್ಧಿಗೊಳಿಸಬಹುದು. ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಈ ದಿನವು ನಿಮಗೆ ಉತ್ತಮ ದಿನವಾಗಬಹುದು.
ಕುಂಭ
ಶನಿವಾರ, 14 ಆಗಸ್ಟ್
ಈ ದಿನದ ಬಗ್ಗೆ ನೀವು ಮಿಶ್ರ ಅಭಿಪ್ರಾಯವನ್ನು ಹೊಂದಿರುತ್ತಿರಿ,ನಿಮ್ಮ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದಿಲ್ಲ ಇದು ನಿಮಗೆ ಸ್ವಲ್ಪಮಟ್ಟಿನ ಕಿರಿಕಿರಿಯನ್ನುಂಟುಮಾಡಬಹುದು. ಏನೇ ಆದರೂ, ಇದು ನಿಮ್ಮ ಕಠಿಣ ಶ್ರಮವನ್ನು ತಡೆಯುವುದಿಲ್ಲ. ನೀವು ನಿಮ್ಮ ಕೆಲಸದಲ್ಲಿ ತಲ್ಲೀನರಾಗುವ ಸಾಧ್ಯತೆಯಿದ್ದು ಇದು ನಿಮ್ಮ ಆನಾರೋಗ್ಯವನ್ನು ಮರೆಯುವಂತೆ ಮಾಡಬಹುದು. ನಿಮ್ಮ ಮೇಲಾಧಿಕಾರಿಗಳಿಗೆ ಸಂಬಂಧಿಸಿ ಇದು ಉತ್ತಮವಲ್ಲ. ಬಹುಶಃ, ನಿಮ್ಮ ಅನಾರೋಗ್ಯದಿಂದಾಗಿ ಕಾರ್ಯದಲ್ಲಿನ ದಕ್ಷತೆಯಲ್ಲಿ ಕೊರತೆ ಉಂಟಾಗಬಹುದು. ನಿಮ್ಮ ಖರ್ಚುವೆಚ್ಚದಲ್ಲಿ ಸ್ವಲ್ಪ ಉದಾರಿಯಾಗಿರುವ ಸಾಧ್ಯತೆಯಿದೆ. ಸಂತೋಷ ಹಾಗೂ ವ್ಯವಹಾರ ಸಂಬಂಧ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ನಿಮ್ಮನ್ನು ಅವಲಂಬಿಸಿರುವವರ ಬಗ್ಗೆ ನೀವು ಕಾಳಜಿಯನ್ನು ಹೊಂದಿರುವಿರಿ. ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ಅನಗತ್ಯ ಚರ್ಚೆ ಮಾಡುವ ಮೂಲಕ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ.
ಮೀನ
ಶನಿವಾರ, 14 ಆಗಸ್ಟ್
ಆರೋಗ್ಯ ಮತ್ತು ಅದೃಷ್ಟಕ್ಕೆ ಸಂಬಂಧಿಸಿ ಇಂದು ಸಾಮಾನ್ಯ ದಿನವಾಗಿದೆ. ಹೆಚ್ಚು ಶ್ರಮದ ಅಗತ್ಯವಿರುವ ಕೆಲಸಗಳನ್ನು ತಪ್ಪಸುವಂತೆ ನಿಮಗೆ ಸಲಹೆ,ಇಂದು ನೀವು ಅದಕ್ಕೆ ತಕ್ಕ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ತಪ್ಪಿಸಿಕೊಳ್ಳಬೇಕಾದಂತಹ ಯಾವುದೇ ಸವಾಲುಗಳು ನಿಮಗಿರುವುದಿಲ್ಲ ಎಂಬುದನ್ನು ಗಣೇಶ ತಿಳಿದಿದ್ದಾರೆ. ಆದರೆ, ಪ್ರಶಂಸೆಗಳು ನಿಮ್ಮನ್ನೂ ಖುಷಿಗೊಳಿಸುತ್ತದೆ. ನೀವು ಮಾಡಬೇಕಾದುದು ಏನೆಂದರೆ ನಿಮ್ಮ ಆರೋಗ್ಯ ಮತ್ತು ವೆಚ್ಚದ ಬಗ್ಗೆ ಎಚ್ಚರಿಕೆಯಿಂದಿರಬೇಕು. ದೇವರ ಮೇಲಿನ ನಂಬಿಕೆಯು ನಿಮ್ಮ ದಿನವನ್ನು ಇನ್ನಷ್ಟು ಉತ್ತಮವಾಗಿಸುತ್ತದೆ.