🙏ನಿತ್ಯವಾಣಿ ಕಡೆ ಶ್ರಾವಣ ಶುಕ್ರವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಕಡೆ ಶ್ರಾವಣ ಶುಕ್ರವಾರದ ರಾಶಿ ಭವಿಷ್ಯ 🙏

ಮೇಷ
ಶುಕ್ರವಾರ, 3 ಸೆಪ್ಟೆಂಬರ್
ಏಳಿರಿ ಮತ್ತು ನಿಮ್ಮ ಕಾಂತಿಭರಿತ ದಿನವನ್ನು ಪ್ರದರ್ಶಿಸಿರಿ,ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮುಂಜಾನೆಯು ಉತ್ತಮ ಸಮಯ. ಉದ್ಯಮಿಗಳು ಮತ್ತು ವೃತ್ತಿಪರರು ಕಾರ್ಯಕ್ಷೇತ್ರದಲ್ಲಿನ ತಮ್ಮ ಅನುಗ್ರಹಪೂರ್ವ ದಿನವನ್ನು ಆನಂದಿಸುತ್ತಾರೆ. ಇಂದು ಅವರ ಪ್ರಯತ್ನಗಳಿಂದ ಮೇಲಾಧಿಕಾರಿಗಳು ಸಂತೋಷ ಹಾಗೂ ತೃಪ್ತಿಯನ್ನು ಹೊಂದುತ್ತಾರೆ. ಸರಕಾರಿ ಮೂಲಗಳಿಂದ ಲಾಭ ಸಿಗಲಿದೆ. ನಿಮ್ಮ ಆಲೋಚನೆಗಳಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನೀವು ಕಾಣಬಹುದು. ಏನೇ ಆದರೂ, ಸಂಜೆಯ ವೇಳೆ ಆಲೋಚನೆಗಳ ಸುಳಿಯಲ್ಲಿ ನೀವು ಕಳೆದುಹೋಗುತ್ತೀರಿ. ಈ ಸಮಯದಲ್ಲಿ ನೀವು ಆತ್ಮವಿಶ್ವಾಸ ಹಾಗೂ ದೃಢನಿರ್ಧಾರದ ಕೊರತೆಯನ್ನು ಎದುರಿಸುತ್ತೀರಿ. ಹರಿಯುವ ನೀರು ಅಥವಾ ಇತರ ನೀರಿರುವ ಪ್ರದೇಶಗಳಿಂದ ದೂರವಿರುವಂತೆ ಸಲಹೆ

ವೃಷಭ
ಶುಕ್ರವಾರ, 3 ಸೆಪ್ಟೆಂಬರ್
ವೃಷಭ ರಾಶಿಯವರಿಗೆ ಇಂದು ಸಾಧಾರಣ ದಿನವು ಕಾದಿದೆ,ನೀವು ನಿಮ್ಮ ಸ್ನೇಹಿತರೊಂದಿಗೆ ನೀವು ನೃತ್ಯ ಮಾಡುವುದರಿಂದ ಅಥವಾ ಬೌಲಿಂಗ್ ಆಡುವುದರಿಂದ ಅವರೊಂದಿಗೆ ಸಂಭ್ರಮದ ಸಮಯವನ್ನು ಕಳೆಯುವಿರಿ. ಏನೇ ಆದರೂ, ಇನ್ನೊಂದು ಕಡೆ ನಿಮ್ಮಲ್ಲಿ ಕೆಲವರು ಹಣಕಾಸು ಮೂಲಗಳ ಸಿದ್ಧತೆ ಮತ್ತು ಆಯೋಜಿಸುವಿಕೆಯಲ್ಲೇ ನಿಮ್ಮ ಪೂರ್ತಿ ದಿನವನ್ನು ಕಳೆಯುವಿರಿ. ‘ಉಳಿತಾಯದ ಹಣವು ಗಳಿಸಿದ ಹಣವಾಗಿದೆ’ ಎಂಬ ಗಾದೆಮಾತನ್ನು ನೆನಪಿನಲ್ಲಿರಿಸದರೆ, ನೀವು ಭವಿಷ್ಯದಲ್ಲಿ ಯಾವುಗೇ ಹಣಕಾಸು ಬಿಕ್ಕಟ್ಟನ್ನು ಎದುರಿಸಲಾರಿರಿ. ಉತ್ತಮ ದಿನವನ್ನು ಹೊಂದಿ.

ಮಿಥುನ
ಶುಕ್ರವಾರ, 3 ಸೆಪ್ಟೆಂಬರ್
ನೀವು ನಿಮ್ಮ ಸುತ್ತಲೂ ಧನಾತ್ಮಕ ವಾತಾವರಣವನ್ನು ಸೃಷ್ಟಿಸಲಿದ್ದೀರಿ, ಇದು ನಿಮ್ಮ ವರ್ತನೆ ಹಾಗೂ ಪ್ರಯತ್ನಗಳಲ್ಲಿ ಪ್ರತಿಫಲಿಸುತ್ತದೆ,ಇಂದಿನ ಗೆಲುವಿನ ಮನಸ್ಥಿತಿಯಲ್ಲಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳಿ. ಬಾಯಲ್ಲಿ ನೀರೂರಿಸುವ ಖಾದ್ಯಗಳ ಸೇವನೆಯ ನಂತರ ಶಾಪಿಂಗ್ ತೆರಳುವ ಪ್ರಯೋದನವನ್ನು ಪಡೆದುಕೊಳ್ಳಬಹುದು. ಕಾರ್ಯದಲ್ಲಿ, ಆರ್ಥಿಕ ಲಾಭ ಸೇರಿದಂತೆ ಎಲ್ಲವೂ ನೀವಂದುಕೊಂಡಂತೆಯೇ ಸಾಗುವುದರಿಂದ, ನೀವು ಉಲ್ಲಾಸಭರಿತ ಸಮಯವನ್ನು ಆನಂದಿಸಿರುವಿರಿ. ಉತ್ತಮವಾದುದೆಲ್ಲವೂ ಉತ್ತಮವಾಗಿಯೇ ಕೊನೆಗೊಳ್ಳುತ್ತವೆ. ನಿಮ್ಮ ಮನಸ್ಸಿಗೆ ಬರುವ ಋಣಾತ್ಮಕ ಆಲೋಚನೆಗಳಿಗೆ ನೀವು ‘ಪ್ರವೇಶವಿಲ್ಲ’ ಸೂಚನಾಫಲಕವನ್ನು ಹಾಕಿರುವುದರಿಂದ ನಿಮ್ಮ ದಿನವು ಶಾಂತಿಯಿಂದ ಕೊನೆಗೊಳ್ಳಲಿ.

ಕರ್ಕಾಟಕ
ಶುಕ್ರವಾರ, 3 ಸೆಪ್ಟೆಂಬರ್
ಇಂದು ನಿಮ್ಮ ಖರ್ಚುವೆಚ್ಚಗಳು ಆದಾಯವನ್ನು ಮೀರಲಿವೆ. ಆದ್ದರಿಂದ ಎಚ್ಚರಿಕೆಯಿಂದ ಖರ್ಚುಮಾಡಿ. ಯಾವುದೇ ಕಣ್ಣಿಗೆ ಸಂಬಂಧಿಸಿದ ತೊಂದರೆ ಉಂಟಾದಲ್ಲಿ, ಮುಂಬರುವ ಹಾನಿಯನ್ನು ತಪ್ಪಿಸಲು ಶೀಘ್ರದಲ್ಲೇ ಕಣ್ಣುತಜ್ಞರನ್ನು ಭೇಟಿಯಾಗಿ. ನಿಮ್ಮ ಮಾತು ಮತ್ತು ಸಿಡುಕನ್ನು ನಿಯಂತ್ರಣದಲ್ಲಿರಿಸಿ ಇಲ್ಲವಾದಲ್ಲಿ ಖಂಡಿತವಾಗಿಯೂ ನೀವು ವಿರೋಧಿಗಳನ್ನು ಆಮಂತ್ರಿಸುತ್ತೀರಿ. ಶಾಂತಿ ಮತ್ತು ಸಮಾಧಾನವು ದಿನದ ದ್ವಿತೀಯಾರ್ಧದಲ್ಲಿನ ನಿಮ್ಮ ಪರಿಸ್ಥಿತಿಗಳನ್ನು ವೃದ್ಧಿಸುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ ಮತ್ತು ನೀವು ನಿಮ್ಮ ಮನೆಯವರೊಂದಿಗಿನ ಸಹಮತವನ್ನು ಆನಂದಿಸುವಿರಿ. ದೀರ್ಘಸಮಯದ ಬಿಡುವಿಲ್ಲದ ದಿನದ ನಂತರ, ವಿಶ್ರಾಂತರಾಗುವಂತೆ ಮತ್ತು ಋಣಾತ್ಮಕ ಚಿಂತನೆಗಳಿಂದ ದೂರವಿರುವಂತೆ  ನಿಮಗೆ ಸಲಹೆ

ಸಿಂಹ
ಶುಕ್ರವಾರ, 3 ಸೆಪ್ಟೆಂಬರ್
ಈ ದಿನ ನೀವು ಎರಡು ರೀತಿಯ ಪರಿಸ್ಥಿತಿಗಳನ್ನು ಹೊಂದುವಿರಿ. ವೈಯಕ್ತಿಕ ಅಥವಾ ವೃತ್ತಿ ಕ್ಷೇತ್ರ ಯಾವುದೇ ಆಗಲಿ, ದಿನದ ಪೂರ್ವಾರ್ಧದಲ್ಲಿ ನೀವು ಸಂಪೂರ್ಣ ಶುಭಸುದ್ದಿಗಳನ್ನೇ ಪಡೆಯುವಿರಿ. ಸುದ್ದಿಗಳು ಲಾಭದಾಯಕವಾಗಿರುತ್ತದೆ ಮತ್ತು ಇದರಿಂದಾಗಿ ನೀವು ಗೆಲುವಿನಿಂದ ಕೂಡಿರುತ್ತೀರಿ, ನಿಮ್ಮ ಆದಾಯದಲ್ಲಿ ಹೆಚ್ಚಳ ಮತ್ತು ಇತರ ಧನಮೂಲಗಳು ದೊರೆಯುವ ಸಾಧ್ಯತೆಯಿರುವುದರಿಂದ ಅಪೇಕ್ಷಿಸಿದ ಒಳ್ಳೆಯದನ್ನೇ ನಿರೀಕ್ಷಿಸಿ. ಏನೇ ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಗಳು ಅನನುಕೂಲಕರವಾಗಿರುವುದರಿಂದ ನಿಮ್ಮ ಗ್ರಹಗತಿಗಳ ಮಧ್ಯಾಹ್ನದ ಬಳಿಕ ಬಿಡುವು ತೆಗೆದುಕೊಂಡಿರುವಂತೆ ಅನಿಸುತ್ತದೆ. ನಿಮ್ಮ ಆಕ್ರೋಶವು ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಇದು ನಿಮ್ಮ ಸುತ್ತಲಿರುವ ಜನರ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಡುತ್ತದೆ. ಅಪಘಾತದ ಸಂಭಾವ್ಯತೆಯಿರುವುದರಿಂದ ನೀವು ಅತೀ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ. ನಿಮ್ಮ ಮಕ್ಕಳ ಭವಿಷ್ಯದ ಕುರಿತಂತೆ ನೀವು ತೀವ್ರ ಒತ್ತಡಕ್ಕೆ ಒಳಗಾಗುವಿರಿ ಮತ್ತು ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಕನ್ಯಾ
ಶುಕ್ರವಾರ, 3 ಸೆಪ್ಟೆಂಬರ್
ಕುಟುಂಬದೊಂದಿಗಿನ ನಿಮ್ಮ ಸಂಬಂಧಗಳು ಇಂದು ಇನ್ನಷ್ಟು ಬಲಗೊಳ್ಳುತ್ತವೆ. ಸ್ನೇಹಿತರು ಮತ್ತು ಸಂಬಂಧಿಗಳನ್ನು ಭೇಟಿ ಮಾಡುವಿರಿ ಮತ್ತು ಅವರೊಂದಿಗೆ ಸಂತಸ ಹಂಚಿಕೊಳ್ಳುವಿರಿ. ಸಾಧ್ಯವಿದ್ದರೆ ಅವರೊಂದಿಗೆ ವಿಹಾರದ ಯೋಜನೆ ರೂಪಿಸಿ. ಯೋಜನೆಗಳಲ್ಲಿನ ಯಶಸ್ಸು, ಪ್ರಭಾವಿತ ಮೇಲಾಧಿಕಾರಿಗಳು ಇವೆಲ್ಲವೂ ನಿಮ್ಮ ದಿನವನ್ನು ಉಲ್ಲಾಸಗೊಳಿಸಲಿದೆ. ಬ್ರಹ್ಮಚಾರಿಗಳು ಅಥವಾ ಸಂಗಾತಿಯ ಅನ್ವೇಷಣೆಯಲ್ಲಿ ತೊಡಗಿರುವವರು ತಾಳ್ಮೆಯಿಂದಿರಬೇಕಾಗುತ್ತದೆ ಯಾಕೆಂದರೆ, ಅವರ ಅದೃಷ್ಟದ ಸಮಯವು ಪ್ರಾರಂಭಗೊಂಡಿದ್ದು, ಸದ್ಯದಲ್ಲಿಯೇ ಕಂಕಣಬಲವು ಕೂಡಿಬರಲಿದೆ. ಏನೇ ಆದರೂ, ನಿಮ್ಮ ಸಿಡುಕಿನ ಬಗ್ಗೆ ನೀವು ಎಚ್ಚರಿಕೆವಹಿಸಬೇಕಾಗುತ್ತದೆ. ಗಣೇಶನ ತಲೆಯನ್ನು ಬದಲಿಸಬಹುದು ಆದರೆ ನಿಮ್ಮ ತಲೆ ಬದಲಿಸಲು ಸಾಧ್ಯವಿಲ್ಲ. ಆದ್ದರಿಂದ ಸುರಕ್ಷಿತವಾಗಿ ವಾಹನ ಚಲಾಯಿಸಿ.

ತುಲಾ
ಶುಕ್ರವಾರ, 3 ಸೆಪ್ಟೆಂಬರ್
ಚಿಂತೆಗಳ ಸುಳಿಯಲ್ಲಿ ಸಿಲುಕುವಿರಿ ಮತ್ತು ಎಂದಿಗಿಂತ ಇಂದು ನೀವು ಇಂದು ಎಂದಿಗಿಂತ ನಿರುತ್ಸಾಹದಲ್ಲಿರುತ್ತೀರಿ, ನಿಮ್ಮ ಮಕ್ಕಳಿಗೆ ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಇದು ನಿಮ್ಮನ್ನು ಅಸಮಾಧಾನಗೊಳಿಸಲಿದೆ. ಕಾರ್ಯಸ್ಥಳದಲ್ಲಿ, ನಿಮ್ಮ ಮೇಲಾಧಿಕಾರಿಗಳು ನಿಮ್ಮ ಮೇಲೆ ಅಸಂತುಷ್ಟಗೊಂಡಿದ್ದಾರೆ ಎಂದು ತಿಳಿದುಕೊಂಡಿರುವುದರಿಂದ ನಿಮ್ಮ ಪರಿಸ್ಥಿತಿಯು ಅನುಕೂಲಕರವಾಗಿರುವುದಿಲ್ಲ. ಆದರೆ, ದ್ವಿತೀಯಾರ್ಧದಲ್ಲಿ ನಿಮ್ಮ ಗ್ರಹಗತಿಗಳು ಕ್ರಿಯಾಶೀಲವಾಗುತ್ತವೆ. ನಿಮ್ಮ ಮೇಲಾಧಿಕಾರಿಗಳೊಂದಿಗಿನ ಸಹಮತವು ವೃದ್ಧಿಯಾಗುತ್ತದೆ. ಕಾರ್ಯದಲ್ಲಿನ ನಿಮ್ಮ ಅಭಿವೃದ್ಧಿಯನ್ನು ನೀವು ಆನಂದಿಸುವಿರಿ. ಉತ್ತಮ ಕಾರ್ಯಗಳಿಗಾಗಿ ಸಮಾಜದ ಮನ್ನಣೆಯನ್ನು ಆನಂದಿಸಿ. ಪ್ರಶಾಂತ ನಿದ್ದೆಯನ್ನು ಹೊಂದಿರಿ.

ವೃಶ್ಚಿಕ
ಶುಕ್ರವಾರ, 3 ಸೆಪ್ಟೆಂಬರ್
ಧಾರ್ಮಿಕ ಚಟುವಟಿಕೆಗಳು ಮತ್ತು ದೇವರಲ್ಲಿನ ನಂಬಿಕೆಯು ನಿಮ್ಮನ್ನು ದುರಾದೃಷ್ಟ ಸನ್ನಿವೇಶಗಳಿಂದ ಪಾರು ಮಾಡಲಿದೆ. ನಿಮ್ಮ ಸುತ್ತಲೂ ಅವಿಶ್ರಾಂತತೆ ಮತ್ತು ಅಹಿತಕರ ಭಾವನೆಯನ್ನು ಹೊಂದುವಿರಿ. ಬೆಂಕಿಗೆ ತುಪ್ಪ ಸುರಿಯುವಂತಾಗಬಹುದಾದ ಮಾತುಗಳನ್ನು ಆಡುವ ಮುನ್ನ ಎರಡೆರಡು ಬಾರಿ ಯೋಚಿಸಿ. ಕೆಲಸದಲ್ಲಿನ ಅನಿರೀಕ್ಷಿತ ಘಟನೆಗಳು ಮತ್ತು ವಿರೋಧಗಳು ನಿಮ್ಮಲ್ಲಿ ಆಕ್ರೋಶವನ್ನು ಸೃಷ್ಟಿಸಬಹುದು. ಅನಿಯಮಿತ ತಿನ್ನುವ ಹವ್ಯಾಸ ಅಥವಾ ಊಟ ತ್ಯಜಿಸುವಿಕೆಯು ನಿಮಗೆ ಜೀರ್ಣ ತೊಂದರೆಯನ್ನು ಉಂಟುಮಾಡಬಲ್ಲದು. ವೈದ್ಯರ ಭೇಟಿಮಾಡುವಂತೆ ಸಲಹೆ ನೀಡಲಾಗುತ್ತದೆ.

ಧನು
ಶುಕ್ರವಾರ, 3 ಸೆಪ್ಟೆಂಬರ್
ನಿಮಗಾಗಿ ಮಿಶ್ರಫಲದ ದಿನವನ್ನು ಹೊಂದಿದ್ದು,ನಿಮ್ಮ ಮುಂಜಾನೆಯು ಉಲ್ಲಾಸ ಹಾಗೂ ಹುರುಪಿನಿಂದ ಕೂಡಿರುತ್ತದೆ. ಧನಾತ್ಮಕ ಶಕ್ತಿಗಳು ನಿಮ್ಮನ್ನು ಹಿಂಬಾಲಿಸುತ್ತದೆ ಪರಿಣಾಮವಾಗಿ, ಮನೆಯ ವಾತಾವರಣವು ಶಾಂತಿಯಿಂದ ಕೂಡಿರುತ್ತದೆ. ಏನೇ ಆದರೂ, ಸಂಜೆಯ ವೇಳೆಗೆ ಪರಿಸ್ಥಿತಿಯು ಬದಲಾಗುತ್ತದೆ. ನೀವು ಕ್ಷೋಭೆ ಅಥವಾ ಒತ್ತಡಕ್ಕೆ ಒಳಗಾದಲ್ಲಿ, ಮೌನವಾಗಿರಿ. ಇಲ್ಲವಾದಲ್ಲಿ ಮನೆಮಂದಿಯೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ವಿನೋದಗೇಡಿಯಾಗುವ ಮೂಲಕ ನಿಮ್ಮ ದಿನವನ್ನು ಕೊನೆಗೊಳಿಸಬಹುದು. ನಿಮ್ಮ ಕಣ್ಣನ್ನು ಮುಚ್ಚಿರಿ ಮತ್ತು ಧ್ಯಾನಮಾಡಿ. ನಿಮ್ಮ ಮನಸ್ಸನ್ನು ಶಾಂತರೀತಿಯಲ್ಲಿಡಲು ಇದೊಂದೇ ಪರಿಹಾರ.

ಮಕರ
ಶುಕ್ರವಾರ, 3 ಸೆಪ್ಟೆಂಬರ್
ನಿಮ್ಮ ನಾಲಗೆಯ ಮಧುರತೆಯ ಬಳಕೆಯಿಂದ ನಿಮ್ಮ ಇಂದಿನ ಹಲವು ಹೋರಾಟಗಳಲ್ಲಿ ಜಯಗಳಿಸಬಹುದು, ಮನೆಯಲ್ಲಿನ ವಾತಾವರಣವು ಶಾಂತ ಹಾಗೂ ಉತ್ಸಾಹದಿಂದಿರುತ್ತದೆ. ಗೌರವ ಮತ್ತು ಘನತೆಯು ವೃದ್ಧಿಸಲಿದೆ. ಆರ್ಥಿಕ ಲಾಭಗಳಿಂದಾಗಿ ನಿಮ್ಮ ಬೊಕ್ಕಸವು ತುಂಬಬಹುದು. ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಹೊಸ ಕಾರಿನಲ್ಲಿ ತಿರುಗಾಟಕ್ಕೆ ತೆರಳಿ. ದೂರ ವಾಹನ ಚಾಲನೆಯು ಕೆಟ್ಟ ಆಲೋಚನೆಯಲ್ಲ. ಸಂಜೆಯನ್ನು ಸಂಪೂರ್ಣವಾಗಿ ಆನಂದಿಸಿ.

ಕುಂಭ
ಶುಕ್ರವಾರ, 3 ಸೆಪ್ಟೆಂಬರ್
ಇಂದು ನೀವು ಕ್ರಿಯಾತ್ಮಕ ಮನಸ್ಥಿತಿಯಲ್ಲಿರುವುದರಿಂದ ನಿಮ್ಮ ಕಚೇರಿ ಕಾರ್ಯಗಳನ್ನು ಹಿಂದಕ್ಕೆ ಹಾಕಲು ಇದು ಸೂಕ್ತ ಸಮಯ. ನಿಮ್ಮ ಕ್ರಿಯಾತ್ಮಕತೆಯು ಉಕ್ಕಿ ಹರಿಯಲಿ, ನಿಮ್ಮ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಅಸಂಖ್ಯಾತ ಪ್ರಶ್ನೆಗಳು ನಿಮ್ಮನ್ನು ಚಿಂತೆಗೀಡುಮಾಡಲಿವೆ. ಉತ್ಸಾಹದಿಂದಿರಿ ಮತ್ತು ವಿಶ್ರಾಂತರಾಗಿರಿ. ಕಚೇರಿಯಲ್ಲಿನ ಪರಿಸ್ಥಿತಿಗಳು ಉತ್ತಮವಾಗಿರುವಂತೆ ಕಂಡುಬರುತ್ತವೆ. ಕಚೇರಿಯಲ್ಲಿ ನೀವು ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮತ್ತು ಸಹಕಾರ ಹಸ್ತಕ್ಕಾಗಿ ನಿಮ್ಮ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಲು ಮರೆಯಬೇಡಿ. ಸಂಜೆಯನ್ನು ಆನಂದಿಸಿ.

ಮೀನ
ಶುಕ್ರವಾರ, 3 ಸೆಪ್ಟೆಂಬರ್
ಇಂದು ಸಾಮಾನ್ಯ ದಿನವು ನಿಮಗಾಗಿ ಕಾದಿದೆ, ಚಿಂತೆಗಳು ನಿಮ್ಮ ಕಾರ್ಯವನ್ನು ನಿಧಾನಗೊಳಿಸುತ್ತವೆ ಮತ್ತು ನಿಮ್ಮ ನಿರ್ಧಾರ ಕೈಗೊಳ್ಳುವ ಅರ್ಹತೆಯನ್ನು ತಗ್ಗಿಸುತ್ತದೆ. ಭೂ ಅಥವಾ ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಚರ್ಚಿಸುವುದನ್ನು ತಪ್ಪಿಸಿ. ನಿಮ್ಮ ಗುಣನಡತೆಗೆ ಮಸಿಬಳಿಯುವಂತಹ ಸನ್ನಿವೇಶಗಳಿಂದ ದೂರ ಉಳಿಯಿರಿ. ಆಸಿಡಿಟಿ ಮುಂತಾದ ಜೀರ್ಣಸಂಬಂಧಿ ಕಾಯಿಲೆಗಳು ನಿಮಗೆ ತೊಂದರೆಯುಂಟುಮಾಡಬಹುದು. ಇದರ ಬಗ್ಗೆ ಎಚ್ಚರವಾಗಿರಿ. ಈ ಅವಧಿಯು ನಿಮ್ಮ ಪರವಾಗಿರದ ಕಾರಣ, ಪ್ರಯಾಣ ಯೋಜನೆಗಳನ್ನು ಮುಂದಿನವಾರಕ್ಕೆ ಮುಂದೂಡಿ. ಏನೇ ಆದರೂ, ವಿದ್ಯಾರ್ಥಿಗಳಿಗೆ ಈ ದಿನವು ಸುಲಭವಾಗಿ ಸಾಗುತ್ತದೆ.

Leave a Reply

Your email address will not be published.