ಮೊಳಕಾಲ್ಮುರು ಸರ್ಕಾರಿ ನೌಕರಿಗಾಗಿ ಪ್ರತ್ಯೇಕವಾದ *ಕೋವಿಡ್ ಕೇರ್ ಸೆಂಟರ್* ತೆರೆಯುವಂತೆ ಜಿಲ್ಲಾಡಿಳಿತಕ್ಕೆ ಮನವಿ

ನಿತ್ಯವಾಣಿ, ಚಿತ್ರದುರ್ಗ, (ಜೂ. 1) : ಮೊಳಕಾಲ್ಮುರು ತಾಲ್ಲೂಕಿನಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಜೊತೆಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆಗೆ ಸದಾ ಹೆಗಲುಕೊಟ್ಟು ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರಿಗಾಗಿ ಪ್ರತ್ಯೇಕವಾದ *ಕೋವಿಡ್ ಕೇರ್ ಸೆಂಟರ್* ತೆರೆಯದೆ ಇರುವ ಬಗ್ಗೆ

ಸರ್ಕಾರದ ಆದೇಶದಂತೆ ಅನಾರೋಗ್ಯಪೀಡಿತ 50 ವರ್ಷಗಳ ಮೇಲ್ಪಟ್ಟ ನೌಕರರನ್ನು ಕರೋನಾ ಕರ್ತವ್ಯಕ್ಕೆ ನಿಯೋಜನೆ ಮಾಡದಂತೆ,

ಕರೋನಾ ಕರ್ತವ್ಯ ನಿರತ ಸರ್ಕಾರಿ ನೌಕರರಿಗೆ ಹಾಗೂ ಶಿಕ್ಷಕರಿಗೆ *ಸುರಕ್ಷತಾ ಕಿಟ್ಟು * ನೀಡುವಂತೆ,

ಕರೋನಾ ಕರ್ತವ್ಯಕ್ಕೆ ರೋಟೇಶನ್ ಮಾದರಿಯಲ್ಲಿ ನೌಕರರನ್ನು ನಿಯೋಜನೆ ಮಾಡುವಂತೆ,

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಅಧ್ಯಕ್ಷ ಕೆ ಮಂಜುನಾಥ್ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಜೊತೆಗೂಡಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿ ಗಳಿಗೆ, ತಾಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾಗೂ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಒತ್ತಾಯಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗಜಿಲ್ಲಾಧ್ಯಕ್ಷ ಕೆ ಮಂಜುನಾಥ್

Leave a Reply

Your email address will not be published.