ನಿತ್ಯವಾಣಿ, ದಾವಣಗೆರೆ, ( ಜುಲೈ.1 2021) : ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ಕರ್ನಾಟಕದ ದಾವಣಗೆರೆಯಲ್ಲಿರುವ
ತನ್ನ ಆಸ್ಪತ್ರೆ ಆವರಣದಲ್ಲಿ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸಾ ವಿಭಾಗ ಆರಂಭಿಸಿದೆ. ಮಿನಿಮಲ್ ಇನ್ವೇಸಿವ್
ಕಾರ್ಡಿಯಾಕ್ ಸರ್ಜರಿ ಅಥವಾ ಕೀ ಹೋಲ್ ಹೃದಯ ಶಸ್ತ್ರಚಿಕಿತ್ಸೆ ಹೃದಯ ರೋಗಗಳಿಗೆ ಚಿಕಿತ್ಸೆ ನೀಡುವ
ವಿನೂತನ ಅನುಶೋಧನೆಯಾಗಿದೆ. ಇದಕ್ಕಾಗಿಯೇ ವಿಶೇಷ ವಿಭಾಗವನ್ನು ತೆರೆಯಲಾಗಿದ್ದು, ಇದು ಅತ್ಯಾಧುನಿಕ
ಹಾಗೂ ತೀರಾ ಅತ್ಯುನ್ನತ ಸಲಕರಣೆಗಳು ಮತ್ತು ವ್ಯಾಪಕ ಅನುಭವ ಇರುವ ತಂಡವನ್ನು ಒಳಗೊಂಡಿದೆ.
ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆ ಹೃದ್ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ಬಹಳಷ್ಟು ಪ್ರಯೋಜನಕಾರಿ. ಕೆಲ ಬಗೆಯ
ಹೃದ್ರೋಗಗಳಿಗೆ ಕನಿಷ್ಠ ಗಾಯದ ಶಸ್ತ್ರಚಿಕಿತ್ಸೆಯೇ ಅತ್ಯಂತ ಸೂಕ್ತವಾಗಿದೆ. ಇಲ್ಲಿ ಶಸ್ತ್ರಚಿಕಿತ್ಸೆಯನ್ನು ರೋಗಿಯ
ದೇಹದಲ್ಲಿ ಸಣ್ಣ ಗಾತ್ರದ ರಂಧ್ರ ಮಾಡಲಾಗುತ್ತದೆ (ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲಿ ಮಾಡುವ ದೊಡ್ಡ ಪ್ರಮಾಣದ
ಛೇದನ ಅಥವಾ ಗಾಯದ ಬದಲಾಗಿ).
ಈ ಸಣ್ಣ ಗಾತ್ರದ ರಂಧ್ರಗಳನ್ನು ವಿಶೇಷ ಸರ್ಜಿಕಲ್ ಸಾಧನಗಳನ್ನು ಬಳಸಿಕೊಂಡು ಮಾಡಲಾಗುತ್ತದೆ. ಕನಿಷ್ಠ ಗಾಯದ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆ ಮಾಡುವ ಛೇದನ ಸುಮಾರು ಎರಡರಿಂದ ಮೂರು ಇಂಚು ಮಾತ್ರ ಆಗಿರುತ್ತದೆ. ಆದರೆ ಸಾಮಾನ್ಯ ವಿಧಾನದಲ್ಲಿ ಆರರಿಂದ ಎಂಟು
ಇಂಚು ಉದ್ದದ ಗಾಯ ಮಾಡಬೇಕಾಗುತ್ತದೆ. ಹೀಗೆ ಈ ಗಾಯ ವಾಸಿಯಾಗಲು ಬೇಕಾಗುವ ಸಮಯ ತೀರಾ ಕಡಿಮೆ
ದಾವಣಗೆರೆ ತಂಡದಲ್ಲಿ ಇಂಥ ಶಸ್ತ್ರಚಿಕಿತ್ಸೆಯನ್ನು ಹೃದ್ರೋಗ ಶಸ್ತ್ರಚಿಕಿತ್ಸಾ ಸಲಹಾತಜ್ಞ ಡಾ|| ಮುರಳೀಬಾಬು, ಡಾ||
ರವಿವರ್ಮ ಪಾಟೀಲ್, ಹೃದ್ರೋಗ ಅರಿವಳಿಕೆ ತಜ್ಞ ಡಾ.ಪ್ರಶಾಂತ್ ಹಾಗೂ ಡಾ.ಸುಜಿತ್ ಎಚ್.ಎಂ. ಅವರನ್ನು
ಒಳಗೊಂಡ ತಂಡ ನಿರ್ವಹಿಸುತ್ತದೆ.
ಹೊಸ ಸೌಲಭ್ಯದ ಬಗ್ಗೆ ವಿವರಗಳನ್ನು ನೀಡಿದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಶಿಕುಮಾರ್ ಪಟ್ಟಣಶೆಟ್ಟಿ “ಭಾರತದಲ್ಲಿ
ಕೇವಲ ದೊಡ್ಡ ನಗರಗಳಲ್ಲಿ ಮಾತ್ರವಲ್ಲ ದೇ ದೇಶಾದ್ಯಂತ ಹೃದ್ರೋಗ ಹೆಚ್ಚುತ್ತಿದೆ. ಪ್ರತಿಯೊಂದು ಬಗೆಯ
ಹೃದ್ರೋಗಗಳಿಗೂ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಬೇಕಾಗುವುದಿಲ್ಲ. ಈ ವಿಶೇಷ ಶಸ್ತ್ರ ಚಿಕಿತ್ಸಾ ವಿಧಾನದ ಮೂಲಕ
ನಾವು ನಾರಾಯಣ ಹೆಲ್ತ್ ನಲ್ಲಿರುವ ಕ್ಲಿನಿಕಲ್ ಪರಿಣತಿಯನ್ನು ನಗರಗಳಿಂದಾಚೆಗೂ ವಿಸ್ತರಿಸುತ್ತಿದ್ದೇವೆ. ಈ ವಿಶೇಷ
ವಿಭಾಗವು ದಾವಣಗೆರೆ ಮತ್ತು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸಾ
ಸೌಲಭ್ಯಗಳನ್ನು ಪಡೆಯಲು ದೊಡ್ಡ ನಗರಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುತ್ತದೆ” ಎಂದು ಹೇಳಿದರು.
———————-
ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆಯ ಲಾಭಗಳು
* ಉತ್ತಮ ಸೌಂದರ್ಯ, ಎದೆಯ ಎದುರು ಗಾಯದ ಕಲೆ ಇಲ್ಲ
* ಸ್ಟೆರ್ನಂ (ಎದೆಯ ಎಲುಬು) ಕತ್ತರಿಸುವುದಿಲ್ಲ
* ಕಡಿಮೆ ನೋವು
* ರಕ್ತದ ಕಡಿಮೆ ಅಗತ್ಯತೆ
* ಶೀಘ್ರ ಗುಣಮುಖ
——————-
ನಾರಾಯಣ ಹೆಲ್ತ್ ಬಗ್ಗೆ
ವೈದ್ಯಕೀಯ ಜಗತ್ತು ಒದಗಿಸಬಹುದಾದ ಎಲ್ಲ ತೃತೀಯ ಹಂತದ ಆರೈಕೆ ಸೌಲಭ್ಯಗಳನ್ನು ಹೊಂದಿರುವ ನಾರಾಯಣ
ಹೆಲ್ತ್, ಎಲ್ಲ ರಿಗೂ ಒಂದೇ ನಿಲುಗಡೆಯ ಆರೋಗ್ಯಸೇವಾ ಗಮ್ಯತಾಣವಾಗಿದೆ. ಡಾ.ದೇವಿಶೆಟ್ಟಿಯವರು ಆರಂಭಿಸಿದ
ನಾರಾಯಣ ಹೆಲ್ತ್ ಗ್ರೂಪ್ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಾರ್ಯಾಚರಣೆಯಲ್ಲಿ ರುವ ಹಾಸಿಗೆ
ಸಂಖ್ಯೆ ಆಧಾರದಲ್ಲಿ ಇಡೀ ದೇಶದಲ್ಲೇ ಎರಡನೇ ಅತಿದೊಡ್ಡ ಆರೋಗ್ಯಸೇವಾ ಸಂಸ್ಥೆಯಾಗಿದೆ. ಮೊದಲ
ಸೌಲಭ್ಯವನ್ನು 2000ನೇ ಇಸ್ವಿಯಲ್ಲಿ ಅಂದಾಜು 225 ಕಾರ್ಯಾಚರಣೆ ಬೆಡ್ಗಳೊಂದಿಗೆ ಎನ್ಎಚ್ ಹೆಲ್ತ್ ಸಿಟಿ
ಹೆಸರಿನಲಿ ್ಲ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ಕಂಪನಿ ಇಂದು ಮಲ್ಟಿಸ್ಪೆಷಾಲಿಟಿ ತೃತೀಯ ಹಂತದ ಮತ್ತು
ಪ್ರಾಥಮಿಕ ಆರೋಗ್ಯಸೇವಾ ಸೌಲಭ್ಯಗಳನ್ನು ಒದಗಿಸುವ ಸರಣಿಯಾಗಿ ಬೆಳೆದಿದ್ದು, ಭಾರತದಲ್ಲಿ 23 ಆಸ್ಪತ್ರೆ ಮತ್ತು
7 ಹೃದ್ರೋಗ ಚಿಕಿತ್ಸಾ ಕೇಂದ್ರಗಳನ್ನು ಹೊಂದಿದೆ. ಏಕೈಕ ಸಾಗರೋತ್ತರ ಆಸ್ಪತ್ರೆ ಕೇಮನ್ ದ್ವೀಪದಲ್ಲಿ ದೆ. ಒಟ್ಟು 5900
ಕಾರ್ಯಾಚರಣೆ ಬೆಡ್ಗಳು ಎಲ್ಲ ಕೇಂದ್ರಗಳಲ್ಲಿವೆ. ಜತೆಗೆ 6800 ಹಾಸಿಗೆಗಳಿಗೆ ವಿಸ್ತರಿಸುವ ಸಾಮಥ್ರ್ಯವನ್ನು
ಹೊಂದಿದೆ. (ವಿವರಗಳಿಗೆ ಭೇಟಿ ನೀಡಿ: www.narayanahealth.org )
====================
ಹೆಚ್ಚಿ ನ ಮಾಹಿತಿಗಾಗಿ ಕರೆ ಮಾಡಿ : 9901662045
9980571756